ವಿಟ್ಲ ಪಪಂ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2021-12-13 13:03 GMT

ಬಂಟ್ವಾಳ, ಡಿ.13: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಡಿ.27ರಂದು ನಡೆಯಲಿದ್ದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದಿದೆ. 

ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಮುದೂರು ಕೊಲ್ಯ ಹೆಸರಿನ ಒಂದನೇ ವಾರ್ಡಿನಲ್ಲಿ (ಸಾಮಾನ್ಯ) ಕೃಷ್ಣಪ್ಪ ಗೌಡ, ಬೊಬ್ಬೆಕೇರಿ ಹೆಸರಿನ ಎರಡನೇ ವಾರ್ಡಿನಲ್ಲಿ (ಹಿಂ.ವರ್ಗ ಎ ಮಹಿಳೆ) ಸಂಗೀತಾ ಪಾಣೆಮಜಲು, ಮೇಗಿನಪೇಟೆ ಮೂರನೇ ವಾರ್ಡಿನಲ್ಲಿ (ಹಿಂ.ವರ್ಗ ಬಿ) ಜಯಂತ್ ಸಿ.ಎಚ್., ಕುರುಂಬಳ ನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ರಕ್ಷಿತಾ, ಪುಚ್ಚೆಗುತ್ತು ಐದನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ವಸಂತ ಕೆ. 

ಉಕ್ಕುಡ ಆಲಂಗಾರು ಆರನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ವಿಜಯಲಕ್ಷ್ಮೀ, ಅಪ್ಪೇರಿಪಾದೆ ಏಳನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ರವಿಪ್ರಕಾಶ್, ಉಕ್ಕುಡ ದರ್ಬೆ ಎಂಟನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಸುನೀತಾ, ಶಿವಾಜಿನಗರ ಒಂಬತ್ತನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಕೃಷ್ಣ ನಾಯ್ಕ, ಸೇರಾಜೆ ಹತ್ತನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಸುಮತಿ ಕೋಟ್ಯಾನ್. 

ರಥಬೀದಿ ಹನ್ನೊಂದನೇ ವಾರ್ಡಿನಲ್ಲಿ (ಸಾಮಾನ್ಯ) ಅರುಣ್ ವಿಟ್ಲ, ಅನ್ನಮೂಲೆ ಹನ್ನೆರಡನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಹರೀಶ್ ಸಿ.ಎಚ್., ಒಕ್ಕೆತ್ತೂರು ಹದಿಮೂರನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಪುಷ್ಪಾ ಎನ್., ಅನಿಲಕಟ್ಟೆ ಹದಿನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ) ಅಶೋಕ್ ಕುಮಾರ್ ಶೆಟ್ಟಿ, ಇರಂದೂರು ಪಡೀಲ್ ಹದಿನೈದನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಸಂಧ್ಯಾ ಗಣೇಶ್.  

ಸುರುಳಿಮೂಲೆ ಹದಿನಾರನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಕೃಷ್ಣಪ್ಪ ಸುರುಳಿಮೂಲೆ, ಮಾಮೇಶ್ವರ ಹದಿನೇಳನೇ ವಾರ್ಡಿನಲ್ಲಿ (ಸಾಮಾನ್ಯ) ಕರುಣಾಕರ ಗೌಡ, ನೆಲ್ಲಿಗುಡ್ಡೆ ಹದಿನೆಂಟನೇ ವಾರ್ಡಿನಲ್ಲಿ (ಸಾಮಾನ್ಯ) ಕೃಷ್ಣಪ್ಪ ಅವರನ್ನು ಅಭ್ಯರ್ಥಿಗಳೆಂದು ಬಿಜೆಪಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News