ಬ್ರಹ್ಮಾವರ: ಜುಗಾರಿ ಆಡುತ್ತಿದ್ದ ಮೂವರ ಬಂಧನ
Update: 2021-12-13 16:38 GMT
ಬ್ರಹ್ಮಾವರ, ಡಿ.13: ಚಾಂತಾರು ಗ್ರಾಮದ ಗಿಳಿಹಾಡಿ ಎಂಬಲ್ಲಿನ ಹಾಡಿಯಲ್ಲಿ ಡಿ.13ರಂದು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಕುಂಜಾಲು ಜೆಡ್ಡುವಿನ ಪ್ರಕಾಶ ಕುಲಾಲ್(38), ಆರೂರಿನ ಪ್ರೀತೇಶ್ ಶೆಟ್ಟಿ(43), ಕುಂಜಾಲಿನ ದಿನೇಶ ಗಾಣಿಗ(42) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತರಿಂದ 1,770ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.