ಶಿರ್ವ: ಸಂಶಯಾಸ್ಪದ ಸಾವು; ದೂರು

Update: 2021-12-13 16:39 GMT

ಶಿರ್ವ, ಡಿ.13: ಬೆಳ್ಳೆ ಗ್ರಾಮದ ಪಾಂಬೂರು ಎಂಬಲ್ಲಿ ಮನೆಯ ಪೈಟಿಂಗ್ ಕೆಲಸ ಮಾಡುವಾಗ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಮರಣದಲ್ಲಿ ಸಂಶಯ ಇರುವುದಾಗಿ ಮೃತರ ಮನೆಯವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕೊರಂಗ್ರಪಾಡಿ ನಿವಾಸಿ ಮಾಧವ ಕಾಂಚನ ಎಂಬವರ ಮಗ ಸಂತೋಷ್(32) ಎಂದು ಗುರುತಿಸಲಾಗಿದೆ. ಇವರು ಡಿ.10ರಂದು ಬೆಳಗ್ಗೆ ಪಾಂಬೂರಿನ ಅಗ್ನೇಲ್ ಪ್ರಕಾಶ್ ಎಂಬವರ ಮನೆಯಲ್ಲಿ ಮಹಡಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಆ ವೇಳೆ ಸಂತೋಷ್ ಮೂರ್ಛೆ ತಪ್ಪಿ ಮಹಡಿಯಿಂದ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರು, ಡಿ.12ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಇವರ ಮರಣದಲ್ಲಿ ಸಂಶಯ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮೃತರ ಸಹೋದರ ಸಂಪತ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News