×
Ad

ಅಖಿಲ ಭಾರತ ಮಟ್ಟದ ಚೆಸ್: ಮುತ್ತಯ್ಯಗೆ ಚಾಂಪಿಯನ್ ಪಟ್ಟ

Update: 2021-12-14 23:43 IST

ಕುಂದಾಪುರ, ಡಿ.14: ಕುಂದಾಪುರದ ಟಾರ್ಪಡೊಸ್ ಸ್ಪೋಟ್ಸರ್ ಕ್ಲಬ್ ಆಶ್ರಯದಲ್ಲಿ ನಡೆದ ಟಾರ್ಪಡೊಸ್ ರಶ್ಮೀ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಮಿಳುನಾಡಿನ ಇಂಟರ್‌ನೇಷನಲ್ ಮಾಸ್ಟರ್ (ಐಎಂ) ಮುತ್ತಯ್ಯ ಎ.ಎಲ್. ಅವರು ಅಗ್ರಸ್ಥಾನದೊಂದಿಗೆ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡರು.

ಕರ್ನಾಟಕ ವಿವಿಧ ವಿಭಾಗಗಳಲ್ಲಿ ಮೇಲುಗೈ ಸಾಧಿಸಿ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕುಂದಾಪುರದ ಹರಿಪ್ರಸಾದ್ ಹೊಟೇಲಿನ ಆತಿಥ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಚಾಂಪಿಯನ್‌ಷಿಪ್‌ನಲ್ಲಿ ತಮಿಳುನಾಡಿನ ಚಾಂಪಿಯನ್ ಆಟಗಾರ, ಎಲೋ ರೇಟಿಂಗ್‌ನಲ್ಲಿ 2177 ಅಂಕಗಳನ್ನು ಹೊಂದಿರುವ ಮುತ್ತಯ್ಯ, ಒಟ್ಟು ಒಂಭತ್ತು ಸುತ್ತುಗಳ ಪಂದ್ಯದಲ್ಲಿ 8.5 ಅಂಕಗಳನ್ನು ಗಳಿಸಿ ಅಗ್ರಸ್ಥಾನಿಯಾದರು. ಅವರು ಆಕರ್ಷಕ ಟ್ರೋಫಿ ಯೊಂದಿಗೆ 30,000 ರೂ. ನಗದು ಬಹುಮಾನವನ್ನು ಪಡೆದರು.

ಕರ್ನಾಟಕದ ಐಎಂ ಮಂಗಳೂರಿನ ವಿಯಾನಿ ಅಂಥೋನಿಯೋ ಡಿ‘ಕುನ್ಹಾ 8 ಅಂಕಗಳನ್ನು ಗಳಿಸಿ ರನ್ನರ್‌ಅಪ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಎರಡನೇ ಸ್ಥಾನ ಪಡೆದ ವಿಯಾನಿ 20,000 ರೂ.ಗಳೊಂದಿಗೆ ಆಕರ್ಷ ಟ್ರೋಫಿ ಪಡೆದರು.

ತಮಿಳುನಾಡಿನ ಐಎಂ ಹರಿಕೃಷ್ಣ ಎ.ರಾವ್ 7.5 ಅಂಕಗಳನ್ನು ಗಳಿಸಿ ಟ್ರೋಫಿ ಯೊಂದಿಗೆ 10,000 ರೂ, ನಗದು ಬಹುಮಾನ ಟ್ರೋಫಿ ಗೆದ್ದರು. ರೈಲ್ವೇಸ್‌ನ ಐಎಂ ರತ್ನಾಕರ್ ಕೆ. 7.5 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದೊಂದಿಗೆ 8,000 ರೂ. ನಗದು ಬಹುಮಾನ ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು. 7.5 ಅಂಕ ಗಳಿಸಿದ ತಮಿಳುನಾಡಿನ ಗೋಕುಲಕೃಷ್ಣ ಎಸ್. 7,000 ರೂ. ನಗದು ಬಹುಮಾನ ಗಳಿಸಿದರು.

ನಗದು ಬಹುಮಾನ ಮತ್ತು ಟ್ರೋಫಿ ಗಳಿಸಿದ ಇತರ ಆಟಗಾರರು: ಮಣಿಕಂಠನ್ ಎಸ್.ಎಸ್.(ತಮಿಳುನಾಡು,6,000 ರೂ.), ಬಾಲಕಿಶನ್ (ಕರ್ನಾಟಕ,5,000), ಸಂಯುಕ್ತ ಸಿ,ಎಂ.ಎನ್, (ತಮಿಳುನಾಡು, 4,000), ರಾಮನಾಥನ್ ಬಾಲಸುಬ್ರಹ್ಮಣ್ಯಂ (ತಮಿಳುನಾಡು, 3,500), ವಿರಾಜ್ ಪ್ರಭಾಕರ್ ಶೆಟ್ಟಿ (ಕರ್ನಾಟಕ,3,000), ಮಂದಾರ ಮೋಹನ್ ಸಾನೆ (ಮಹಾರಾಷ್ಟ್ರ, 2,500), ಶ್ಯಾಮ್ ನಿಖಿಲ್ ಪಿ (ಐಸಿಎಫ್, 2,500), ರಾಮಚಂದ್ರ ಭಟ್ (ಕರ್ನಾಟಕ,2,500). ಹೇಮಂತ್‌ರಾಮ್ (ತಮಿಳು ನಾಡು 2,500). ಶ್ರಮಾ ಆರ್. ಪ್ರೀತಮ್ (ಕರ್ನಾಟಕ, 2,500), ಸೆಂಥಿಲ್ ಮಾರನ್ (ತಮಿಳುನಾಡು, 2,500), ಕುಮಾರ ತೇಜ (ಕರ್ನಾಟಕ, 2,000), ಅರವಿಂದ್ ಬಿ.ಆರ್. (ಕರ್ನಾಟಕ,2,000). ನಿಗಾಶ್ ಜಿ (ತಮಿಳುನಾಡು, 2,000), ರಾಘವೇಂದ್ರ ಜಿ. (ಕರ್ನಾಟಕ 2,000), ಅಭಿನವ್ ಭಟ್ (ಕರ್ನಾಟಕ 1,500). ಹರಿಹರನ್ ಸುಬ್ರಮಣಿ (ಕರ್ನಾಟಕ, 1,500), ವೇದಾಂತ್ ನಾಗರಕಟ್ಟೆ (ಮಹಾರಾಷ್ಟ್ರ, 1,500), ಭರತ್ ಎಂ, (ಕರ್ನಾಟಕ, 1,500). ತೇಜಸ್ ಎಂ. ಶೆಣೈ (ಕರ್ನಾಟಕ, 1,500).

ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಡಾ. ರಾಜಗೋಪಾಲ್ ಶೆಣೈ ವಹಿಸಿದ್ದರು. ಕುಳಾಯಿ ಫೌಂಡೇಷನ್‌ನ ಪ್ರತಿಭಾ ಕುಳಾಯಿ, ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟೆ, ಉದ್ಯಮಿ ರಂಜನ್ ನಾಗರಕಟ್ಟೆ, ಟಾರ್ಪಡೊಸ್ ಸ್ಪೋಟ್ಸರ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News