×
Ad

ಅಭಿಮತ ಕೀರ್ತಿ ಕಲಶ ಪುರಸ್ಕಾರಕ್ಕೆ ರವೀಂದ್ರನಾಥ ಶಾನುಭಾಗ್ ಆಯ್ಕೆ

Update: 2021-12-15 17:26 IST
ರವೀಂದ್ರನಾಥ ಶಾನುಭಾಗ್

ಕೋಟ, ಡಿ.15: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಮಹೋನ್ನತ ಸಾಧಕರಿಗೆ ಕೊಡಮಾಡುವ ಕೀರ್ತಿ ಕಲಶ ಮಹಾಗೌರವಕ್ಕೆ ಈ ಬಾರಿ ಬಸ್ರೂರು ಬಳಕೆ ದಾರರ ವೇದಿಕೆಯ ಸಂಚಾಲಕ ಡಾ.ರವೀಂದ್ರನಾಥ್ ಶಾನುಭಾಗ್ ಆಯ್ಕೆ ಯಾಗಿದ್ದಾರೆ.

2022 ಫೆ.26ರಂದು ಮೂಡುಗಿಳಿಯಾರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭ ಡಾ.ನಾಗೇಶ್ (ವೈದ್ಯಕೀಯ ಕ್ಷೇತ್ರ), ತೆಕ್ಕಟ್ಟೆ ಫ್ರೆಂಡ್ಸ್(ಸಮಾಜ ಸೇವೆ) ಹಾಗೂ ಪತ್ರಕರ್ತ ಸತೀಶ ಬಿಲ್ಲಾಡಿ(ಮಾಧ್ಯಮ ಕ್ಷೇತ್ರ) ಇವರಿಗೆ ಯಶೋಗಾಥೆ ಗೌರವ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News