ಸೀತಾನದಿಯಲ್ಲಿ ಮುಳುಗಿ ಯುವಕ ಮೃತ್ಯು

Update: 2021-12-21 15:57 GMT

ಹೆಬ್ರಿ, ಡಿ.21: ಹೆಬ್ರಿ ಗ್ರಾಮದ ಮಠದಬೆಟ್ಟುವಿನಲ್ಲಿರುವ ಸೀತಾನದಿಗೆ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ಮಂಗಳೂರು ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್(24) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಇವರು, ಮಠದಬೆಟ್ಟು ವಿನಲ್ಲಿರುವ ತನ್ನ ಸಂಬಂಧಿಕ ಮುಸ್ತಫಾ ಎಂಬವರ ಮನೆಗೆ ಬಂದಿದ್ದು, ಅಲ್ಲಿ ಮನೆ ಸಮೀಪ ಇರುವ ಸೀತಾನದಿಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಇಕ್ಬಾಲ್ ನೀರಿನ ಆಳ ತಿಳಿಯದೆ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News