ಇಸ್ಪೀಟ್ ಜುಗಾರಿ: ಎಂಟು ಮಂದಿ ಬಂಧನ

Update: 2021-12-21 16:03 GMT

ಪಡುಬಿದ್ರಿ, ಡಿ.21: ಇಲ್ಲಿನ ಬೆಂಗ್ರೆ ರಸ್ತೆಯ ನವರಂಗ ಬಾರ್ ಹಳೆಯ ಕಟ್ಟಡದ ಬಳಿ ಡಿ.20ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಎಂಟು ಮಂದಿ ಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ನಾಗರಾಜ ಪರಸಪ್ಪ(27), ಮಂಜುನಾಥ ಕಟ್ಟಿಮುನಿ(25), ಹಾವೇರಿಯ ಪ್ರಶಾಂತ್ ಭಜಂತ್ರಿ(22), ಬಸಪ್ಪ ಗುಡ್ಡಪ್ಪ(28), ಶಿವಪ್ಪ(45), ಗುಡ್ಡಪ್ಪ(28), ಅಶೋಕ ಬರಮಪ್ಪ(20), ಗದಗದ ರವಿ ಪ್ರಕಾಶ್ ಭಜಂತ್ರಿ (28) ಬಂಧಿತ ಆರೋಪಿಗಳು. ಇವರಿಂದ 3,020ರೂ. ನಗದು ವಶವಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News