ಸಾರ್ವಜನಿಕ ಶಾಂತಿ ಭಂಗ: ನಾಲ್ವರ ಸೆರೆ

Update: 2021-12-23 16:20 GMT

ಗಂಗೊಳ್ಳಿ, ಡಿ.23: ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹಾಲು ಡೈರಿಯ ಬಳಿ ಡಿ.22ರಂದು ರಾತ್ರಿ ವೇಳೆ ಪರಸ್ಪರ ದೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಮೀತ್, ಅಜೀತ್, ಪ್ರದೀಪ್, ನಿಶಾನ್ ಬಂಧಿತ ಆರೋಪಿಗಳು, ಇವರು ಒಬ್ಬರನ್ನೊಬ್ಬರು ಶರ್ಟ್ ಪಟ್ಟಿಯನ್ನು ಹಿಡಿದುಕೊಂಡು ದೂಡಾಡಿಕೊಂಡು ಅವಾಚ್ಯ ಶಬ್ಧಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದಾ ರೆಂದು ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News