×
Ad

ಡಿ.26: ಗಂಜಿಮಠದಲ್ಲಿ ‘ಝಾರಾ ಕನ್ವೆಂಶನ್ ಸೆಂಟರ್’ ಉದ್ಘಾಟನೆ

Update: 2021-12-23 22:44 IST

ಮಂಗಳೂರು, ಡಿ.23: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ಸುಮಾರು 3 ಎಕರೆ ವಿಶಾಲವಾದ ಜಮೀನಿನಲ್ಲಿ ನಿರ್ಮಾಣಗೊಂಡ 1 ಲಕ್ಷ ಚ.ಅ.ವಿಸ್ತೀರ್ಣದ ‘ಝಾರಾ ಕನ್ವೆಂಶನ್ ಸೆಂಟರ್’ ಸಭಾಂಗಣವು ಡಿ.26ರಂದು ಸಂಜೆ 6:30ಕ್ಕೆ ಉದ್ಠಾಟನೆಗೊಳ್ಳಲಿದೆ ಎಂದು ಝಾರಾ ಕನ್ವೆಂಶನ್ ಸೆಂಟರ್‌ನ ಅಧ್ಯಕ್ಷ ಬಿ. ಝಕರಿಯಾ ಜೋಕಟ್ಟೆ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಖಾಝಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಡಿಕೆಎಸ್‌ಸಿ ಅಧ್ಯಕ್ಷ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಸಭಾಂಗಣಗಳನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಅಂಗಾರ ಎಸ್., ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಮಾಜಿ ಸಚಿವರಾದ ಯು.ಟಿ, ಖಾದರ್, ಬಿ.ರಮನಾಥ ರೈ, ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಶಾಸಕರಾದ ಯು.ರಾಜೇಶ್ ನಾಯಕ್, ಡಿ. ವೇದವ್ಯಾಸ ಕಾಮತ್, ಲಾಲಾಜಿ ಮೆಂಡನ್, ಉಮನಾಥ ಕೋಟ್ಯಾನ್, ಕೆ. ಹರೀಶ್‌ ಕುಮಾರ್, ಬಿ.ಎಂ. ಫಾರೂಕ್ ಮಂಜುನಾಥ ಭಂಡಾರಿ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಕೆಪಿಸಿಸಿ ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ.ಆರತಿ ಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ವೈಟ್‌ ಸ್ಟೋನ್‌ ಡೆವೆಲಪರ್ಸ್‌ ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಉಸ್ಮಾನ್‌ ದಾರಿಮಿ, ಗಂಜಿಮಠ ಗ್ರಾಪಂ ಅಧ್ಯಕ್ಷ ನೋನಯ್ಯ ಕೋಟ್ಯಾನ್, ಸದಸ್ಯೆ ಅನಿತಾ ಡಿಸೋಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪದ್ಮವಿಭೂಷಣ ಪುರಸ್ಕೃತ ಡಾ.ಬಿ.ಎಂ. ಹೆಗ್ಡೆ, ಪದ್ಮಶ್ರಿ ಪುರಸ್ಕೃತ ಹರೇಕಳ ಹಾಜಬ್ಬ, ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ಶಾಸಕ ಡಾ. ಭರತ್ ಶೆಟ್ಟಿ ವೈ. ಅವರನ್ನು ಸನ್ಮಾನಿಸಲಾಗುವುದು ಎಂದರು.

ಝಾರಾ ಕನ್ವೆಂಶನ್ ಸೆಂಟರ್‌ನ ನಿರ್ದೇಶಕ ಝಹೀರ್ ಝಕರಿಯಾ ಮಾತನಾಡಿ ಹಲವು ಸಭಾಂಗಣಗಳ ಈ ಸಂಕೀರ್ಣವು ಸಂಪೂರ್ಣ ಹವಾ ನಿಯಂತ್ರಿತ ಮತ್ತು ದೀಪಾಲಂಕೃತಗೊಂಡಿದೆ. ವೈಫೈ ಸೌಕರ್ಯ, ಎಲ್‌ಇಡಿ ಸ್ಕ್ರೀನ್‌ಗಳು, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೈನ್, ಮತ್ತು 24 ತಾಸುಗಳ ವಿದ್ಯುತ್ ವ್ಯವಸ್ಥೆ, ವಿಶಾಲವಾದ ಅಡುಗೆ ಕೋಣೆ, ಸಸ್ಯಾಹಾರಿ ಮತ್ತು ಶಾಕಾಹಾರಿ ಊಟೋಪಚಾರಕ್ಕೆ ಪ್ರತ್ಯೇಕ ಊಟದ ಕೋಣೆಗಳಿವೆ ಎಂದರು.

ಸುಮಾರು 650 ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಮುಖ್ಯ ಸಭಾಂಗಣ ‘ಆರ್ಚಿಡ್’ನಲ್ಲಿ 700, 1ನೆ ಮಹಡಿಯ ’ಸಾಫ್ರಾನ್’ನಲ್ಲಿ 650, ನೆಲ ಅಂತಸ್ತಿನ ‘ಟುಲಿಪ್‌‘ನಲ್ಲಿ 800, ಪಾರ್ಟಿ ಹಾಲ್ ’ಐರಿಸ್’ನಲ್ಲಿ 300, ಬ್ಲೂಬೆಲ್‌ಲ್ನಲ್ಲಿ 200, ಸ್ನೇಹಕೂಟದ ‘ಪರ್ಪಲ್’ನಲ್ಲಿ 500, ‘ಲ್ಯಾವೆಂಡರ್‌‘ ಸೆಮಿನಾರ್ ಹಾಲ್‌ನಲ್ಲಿ 500 ಹಾಗೂ ‘ಝೀಗ್ರೌಂಡ್’ ಹೊರಾಂಗಣದಲ್ಲಿ 600 ಆಸನಗಳ ವ್ಯವಸ್ಥೆಯಿರುತ್ತದೆ. ಅತಿಥಿಗಳಿಗೆ ವಾಸ್ತವ್ಯಕ್ಕಾಗಿ ಸಭಾಂಗಣದಲ್ಲಿ ಮೂರು ಎಕ್ಸಿಕ್ಯುಟಿವ್ ಸೂಟ್ ರೂಮ್‌ಗಳಿರುತ್ತವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಝಾರಾ ಕನ್ವೆಂಶನ್ ಸೆಂಟರ್‌ನ ನಿರ್ದೇಶಕರಾದ ನಝೀರ್ ಝಕರಿಯಾ ಮತ್ತು ಝಾಹಿದ್ ಝಕರಿಯಾ, ವಿವಾಹ ಸಂಘಟನಾ ಸಮಿತಿಯ ಸಂಚಾಲಕರಾದ ಉಮರ್ ಯು.ಎಚ್., ನೌಶಾದ್ ಹಾಜಿ ಸೂರಲ್ಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News