ವಿದ್ಯಾರ್ಥಿನಿ ಆತ್ಮಹತ್ಯೆ
Update: 2021-12-26 22:32 IST
ಮಣಿಪಾಲ, ಡಿ.26: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿ ಕೊಂಡ ಘಟನೆ ರವಿವಾರ ಪರ್ಕಳದ ದೇವಿನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಧಾರವಾಡ ಜಿಲ್ಲೆಯ ಕುಂದಗೋಳ್ ಮೂಲದ ಉಡುಪಿ ಎಂಜಿಎಂ ಪಿಯು ಕಾಲೇಜಿನ ವಿದ್ಯಾರ್ಥಿನಿ ಸರಸ್ವತಿ(16) ಎಂದು ಗುರುತಿಸ ಲಾಗಿದೆ. ತಂದೆ ತಾಯಿ ಜೊತೆ ಪರ್ಕಳದ ದೇವಿನಗರದಲ್ಲಿ ವಾಸ ಮಾಡಿಕೊಂಡಿ ರುವ ಸರಸ್ವತಿ, ತಂದೆತಾಯಿ ಕೆಲಸಕ್ಕೆ ತೆರಳಿದ ವೇಳೆ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.