ಬೇಕಲ | ರೈಲು ಹಳಿ ಮೇಲೆ ಇಬ್ಬರು ಯುವಕರ ಛಿದ್ರಗೊಂಡ ಮೃತದೇಹಗಳು ಪತ್ತೆ

Update: 2023-06-05 06:39 GMT

ಕಾಸರಗೋಡು, ಅ.24: ಬೇಕಲ ಸಮೀಪದ ರೈಲ್ವೆ ಹಳಿಯಲ್ಲಿ ಇಬ್ಬರು ಹೊರರಾಜ್ಯ ಕಾರ್ಮಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿತ್ತು.

ಮೃತರನ್ನು ಮಧ್ಯಪ್ರದೇಶ ಮೂಲದ ಅಭಿಮನ್ಯು ಸಿಂಗ್ (24) ಮತ್ತು ರವಿ ಸಿಂಗ್ (25) ಎಂದು ಗುರುತಿಸಲಾಗಿದೆ. ಇವರು ರವಿವಾರ ಸಂಜೆ ಸ್ನೇಹಿತರ ಜೊತೆ ಬೇಕಲ ಬೀಚ್ ಗೆ ಬಂದಿದ್ದರು. ಜೊತೆಗಿದ್ದವರು ತಾವಿದ್ದ ಶೆಡ್ ಗಳಿಗೆ ಮರಳಿದ್ದರೂ ಅಭಿಮನ್ಯು ಸಿಂಗ್ ಮತ್ತು ರವಿ ಸಿಂಗ್ ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಹುಡುಕಾಟ ನಡೆಸಿದಾಗ, ಬೀಚ್ ಪರಿಸರದ ರೈಲ್ವೆ ಹಳಿಯಲ್ಲಿ ಅವರಿಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರೂ ಪಳ್ಳಿಕೆರೆ ಪರಿಸರದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News