​ಶಿಕ್ಷಣ ಸಹಾಯಾರ್ಥವಾಗಿ ಚೆಕ್ ವಿತರಣೆ

Update: 2022-01-03 17:24 GMT

ಉಳ್ಳಾಲ: ಎಸ್ ವೈ ಎಸ್ ತೊಕ್ಕೋಟ್ಟು ಬ್ರಾಂಚ್ ಇದರ ಆಶ್ರಯದಲ್ಲಿ ಬಡ ಕುಟುಂಬದ ವಿದ್ಯಾರ್ಥಿನಿಯ ಶಿಕ್ಷಣ  ಸಹಾಯಾರ್ಥವಾಗಿ 20,000 ರೂ. ಚಕ್ ವಿತರಣೆ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು.

ಎಸ್ ವೈ ಎಸ್ ತೊಕ್ಕೊಟ್ಟು ಶಾಖೆ ಅಧ್ಯಕ್ಷ ಆರೀಫ್ ಪಿಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ಎಸ್ ವೈ ಎಸ್ ಆಝಾದ್ ನಗರ ಶಾಖೆ ಅಧ್ಯಕ್ಷ ಬಶೀರ್ ಉಳ್ಳಾಲ, ಬದ್ರುದ್ದೀನ್ ಶಾಂತಿ ಬಾಗ್ ಚೆಕ್ ವಿತರಣೆ ಮಾಡಿದರು. ಪಿ.ಎಸ್. ಶಿಹಾಬುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ವೈ ಎಸ್ ಉಸ್ತುವಾರಿ ಅಬ್ದುಲ್ ಸಮದ್ ಮದನಿ ನಗರ, ಅಲ್ ಹಾಜ್ ಯುಡಿ ಅಬ್ದುಲ್ ಹಮೀದ್ ಅಳೇಕಲ, ಇರ್ಫಾನ್ ಮಂಚಿಲ ಉಪಸ್ಥಿ ತರಿದ್ದರು. ಶಮೀರ್ ಪಿಲಾರ್ ಸ್ವಾಗತಿಸಿದರು. ಅಮೀರ್ ತೊಕ್ಕೊಟ್ಟು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News