ನೈಟ್ ಕರ್ಫ್ಯೂ ಉಲ್ಲಂಘನೆ ಆರೋಪ : ಹಲವರ ವಿರುದ್ಧ ಪ್ರಕರಣ ದಾಖಲು

Update: 2022-01-04 16:15 GMT

ಶಿರ್ವ, ಜ.4: ಶಿರ್ವ ಗ್ರಾಮದ ಸ್ಯಾಮ್ ಸ್ಕ್ವಾರ್ ಕಟ್ಟಡದ ಬಳಿ ಜ.3 ರಂದು ನಸುಕಿನ ವೇಳೆ ನೈಟ್ ಕರ್ಪ್ಯೂ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಬಂದು ಸ್ಥಳದಲ್ಲಿ ಗುಂಪು ಸೇರಿದ ವಿಚಾರವಾಗಿ ಕಾಪು ಪೊಲೀಸರು ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಕ್ಷಾ ಹಾಗೂ ಸ್ಕೂಟರಿನಲ್ಲಿದ್ದ ಅಸ್ಟನ್ (29), ರಝೀನ್ (29), ಸೋಮನಾಥ (35), ಅಬ್ದುಲ್ ಸಮಾದ್ (29), ಪ್ರಶಾಂತ್(32), ನವೀನ್ ಕುಮಾರ್, ಜೀವನ್(24), ಮುನಾಸ್(28) ಎಂಬವರು ಮುಖಗವಸು ಧರಿಸದೇ ಗುಂಪು ಸೇರಿ ಸರಕಾರ ಆದೇಶವನ್ನು ಉಲ್ಲಂಘಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News