×
Ad

ಆನೆಗುಡ್ಡೆ ದೇವಳದಲ್ಲಿ ಸೇವೆಗಳು ಸ್ಥಗಿತ: ದರ್ಶನಕ್ಕೆ ಅವಕಾಶ

Update: 2022-01-05 21:39 IST

ಕುಂದಾಪುರ, ಜ.5: ಜಿಲ್ಲೆಯ ಪ್ರಸಿದ್ಧ  ತೀರ್ಥಕ್ಷೇತ್ರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದಲ್ಲಿ ಸರ್ಕಾರದ ಆದೇಶ ದಂತೆ,  ಕೋವಿಡ್19 ರ ಮಾರ್ಗಸೂಚಿ ಯನ್ವಯ ಜ.6ರ ಗುರುವಾರದಿಂದ ಎಲ್ಲಾ ವಿಧದ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.

ಎರಡು ಲಸಿಕೆಗಳನ್ನು ಹಾಕಿಸಿ ಕೊಂಡ, ಮಾಸ್ಕ್ ಧರಿಸಿದವರಿಗೆ ಒಮ್ಮೆಗೆ 50 ಜನರಂತೆ ದೇವರ ದರ್ಶನಕ್ಕೆ ಒಮ್ಮೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತೀರ್ಥ - ಪ್ರಸಾದ, ಹಣ್ಣುಕಾಯಿ ಸೇವೆ ಇರುವುದಿಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಕೋವಿಡ್ ಪ್ರಸರಣವನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಸರ್ಕಾರದ ಮುಂದಿನ ಆದೇಶದ ತನಕ ಈ ನಿಯಮ ಜಾರಿಯಲ್ಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News