ಚಿನ್ನಾಭರಣ ಕಳವು: ದೂರು

Update: 2022-01-05 16:27 GMT

ಕುಂದಾಪುರ, ಜ.5: ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೊರ್ಗಿ ಗ್ರಾಮದ ಕೊರವಡಿಮನೆ ಎಂಬಲ್ಲಿ ನಡೆದಿದೆ.

ಭವಾನಿ ಶೆಡ್ತಿ ಎಂಬವರ ಮನೆಯಲ್ಲಿ ಸುಮಾರು 2 ತಿಂಗಳಿನಿಂದ ಮನೆ ಕೆಲಸ ಮಾಡಿಕೊಂಡಿದ್ದ ಶಾಂತ ಕುಮಾರಿ ಎಂಬಾಕೆಯು ಕಪಾಟಿನ ಕೀ ಬಳಸಿ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಸರ ವನ್ನು ಕಳವು ಮಾಡಿದ್ದು, ಬಳಿಕ ವಂಚಿಸುವ ಉದ್ದೇಶದಿಂದ ಕಳವು ಮಾಡಿದ ಆಭರಣ ಮಾದರಿಯ ನಕಲಿ ಆಭರಣಗಳನ್ನು ಅದೇ ಸ್ಥಳದಲ್ಲಿ ಇಟ್ಟು ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News