ಲಕ್ಷಾಂತರ ರೂ. ಮೌಲ್ಯದ ಬೇಲಿ, ತಂತಿ ಕಳವು

Update: 2022-01-06 16:48 GMT

ಶಂಕರನಾರಾಯಣ, ಜ.6: ಸಿಮೆಂಟ್ ಬೇಲಿ ಕಂಬಗಳು ಹಾಗೂ ಕಬ್ಬಿಣದ ತಂತಿಯನ್ನು ಕಳವು ಮಾಡಿಕೊಂಡು ಹೋದ ಘಟನೆ ಜ.4ರಂದು ರಾತ್ರಿ ವೇಳೆ ಉಳ್ಳೂರು-74 ಗ್ರಾಮ ಬಂಟಕೋಡು ಹೊಳೆಬಾಗಿಲು ಎಂಬಲ್ಲಿ ನಡೆದಿದೆ.

ಹೊಳೆಬಾಗಿಲಿನ ಜಯಲಕ್ಷ್ಮಿ ಶೇಡ್ತಿ ಎಂಬವರ ಜಾಗದ 8 ಅಡಿ ಎತ್ತರದ 60 ಸಿಮೆಂಟ್ ಬೇಲಿ ಕಂಬಗಳನ್ನು ಹಾಗೂ ಐಬಿಎಕ್ಸ್ ಕಬ್ಬಿಣದ ತಂತಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ನೆರೆಕೆರೆ ನಿವಾಸಿಗಳಾದ ಆರೋಪಿ ಪ್ರೇಮ ಶೇಡ್ತಿ ಮತ್ತು ಅವರ ಮಕ್ಕಳಾದ ಪ್ರಭಾಕರ ಶೆಟ್ಟಿ, ಪ್ರವೀಣ ಶೆಟ್ಟಿ, ಪ್ರತಾಪ ಶೆಟ್ಟಿ ಮತ್ತು ಪ್ರದೀಪ ಶೆಟ್ಟಿ ಇವರ ಮೇಲೆ ಸಂಶಯ ಇರುವುದಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಎರಡು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News