ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-01-07 14:24 GMT

ಕಾರ್ಕಳ, ಜ.7: ಅನಾರೋಗ್ಯದಿಂದ ಬಳಲುತ್ತಿದ್ದ ನಿಟ್ಟೆ ಗ್ರಾಮದ ಬೆರದೊಟ್ಟು ಕೊಟ್ನೊಟ್ಟು ನಿವಾಸಿ ರತ್ನಾಕರ ಪ್ರಭು(73) ಎಂಬವರು ಜ.4ರ ಬೆಳಗ್ಗೆಯಿಂದ ಜ.6ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಮನೆಯ ಹತ್ತಿರದಲ್ಲಿರುವ ಜೋಸ್ಪಿನ್ ವಾಯ್ಲೆಟ್ ಮೆಂಡೋನ್ಸಾ ಎಂವರ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ಅನಾರೋಗ್ಯದಿಂದ ಮನನೊಂದು ಡಿ.29ರಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರವಾಗಿ ಅಸ್ವಸ್ಥ ಗೊಂಡಿದ್ದ ಬೈಂದೂರು ತೊಂಡೆಮಕ್ಕಿಯ ಕೃಷ್ಣ ದೇವಾಡಿಗ(53) ಎಂಬವರು ಜ.7ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News