ಹಿರಿಯ ಕಾಂಗ್ರೆಸ್ಸಿಗ ಮಲ್ಪೆ ಭಗವಾನ್ ದಾಸ್ ನಿಧನ

Update: 2022-01-07 17:57 GMT

ಮಲ್ಪೆ, ಜ.7: ಹಿರಿಯ ಕಾಂಗ್ರೆಸಿಗರು, ಮನೋರಮಾ ಮದ್ವರಾಜ್ ಮತ್ತು  ಆಸ್ಕರ್ ಫೆರ್ನಾಂಡಿಸ್ ಅವರ ನಿಕಟ ಸಹವರ್ತಿ, ಉಡುಪಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಮಲ್ಪೆ ಭಗವಾನದಾಸ್ (72) ಇಂದು ನಿಧನರಾದರು.

1949 ರಂದು ಮಲ್ಪೆಯಲ್ಲಿ ಜನಿಸಿದ ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಸೇವಾವಧಿಯಲ್ಲಿ ಬ್ಯಾಂಕ್ ಯೂನಿಯನ್‌ನ ನಾಯಕರಾಗಿ, ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಂಡಿಕೇಟ್ ಬ್ಯಾಂಕ್,  ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ನೇತೃತ್ವ ವಹಿಸಿದ್ದ ಅವರು ಕೊನೆಯವರೆಗೂ ಸಾಮಾಜಿಕ ಕಳಕಳಿಗಾಗಿ ಹೋರಾಟ ನಡೆಸಿದರು.

ಅವಿವಾಹಿತರಾಗಿದ್ದ ಭಗವಾನ್‌ದಾಸ್,  ತಾಯಿ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರ ಜ.8ರಂದು ಮಲ್ಪೆಯ  ರುಧ್ರಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News