ಸಮಾಜ ಸೇವಕ ಹುಸೇನ್ ಹೈಕಾಡಿಗೆ ಸನ್ಮಾನ

Update: 2022-01-08 15:03 GMT

ಕುಂದಾಪುರ, ಜ.8: ಸಮಾಜ ಸೇವೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ, ಕ್ರೀಡೆ, ಸೌಹಾರ್ದತೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಜೇಸಿಸ್‌ನ ವಲಯ 15ರ ಎಸ್‌ಎಂಎ ಇದರ ಸ್ಥಾಪಕ ಕಾರ್ಯದರ್ಶಿಯಾಗಿ ಹುಸೇನ್ ಹೈಕಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಕೋಟೇಶ್ವರದ ಸುಮೇದಾ ಓಪನ್ ಪಾರ್ಕ್‌ನಲ್ಲಿ ಜರಗಿದ ಜೆಸಿಐ ಕುಂದಾ ಪುರ ಸಿಟಿ ಇದರ ಪದಪ್ರದಾನ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಯಿತು. ಇವರು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿಯ ಸಂಘಟನ ಕಾರ್ಯದರ್ಶಿ ಯಾಗಿದ್ದಾರೆ.

ಈ ಸಂದರ್ಭದಲ್ಲಿ ಜನರಲ್ ಲೀಗಲ್ ಕೌನ್ಸಿಲ್ ಜೆಸಿಐ ಇಂಡಿಯಾ ಇದರ ಸೌಜನ್ಯ ಹೆಗ್ಡೆ, ರೋಟರಿ ಉಪ ರಾಜ್ಯಪಾಲ ಪ್ರಭಾಕರ್ ಕುಂಭಾಶಿ, ಪೂರ್ವ ವಲಯಾಧ್ಯಕ್ಷ ಕೆ.ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಮೂಲ್ಕಿ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಅಭಿಲಾಶ್, ನಿಕಟ ಪೂರ್ವ ಅಧ್ಯಕ್ಷ ವಿಜಯ್ ಭಂಡಾರಿ, ಪೂರ್ವ ಅಧ್ಯಕ್ಷ ನಾಗೇಶ್ ನಾವಡ, ಯುವ ಜೇಸಿ ಅಧ್ಯಕ್ಷ ಅಬ್ದುಲ್ ಸೂಹೆಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News