'ಸ್ವಾಮಿಯೇ ಅಯ್ಯಪ್ಪೊ,ಸಿದ್ದರಾಮಯ್ಯ ಮುಂದಿನ ಸಿಎಂ ಆಗಲಿಯಪ್ಪೊ' ಹೇಳುತ್ತಾ ಶಬರಿಮಲೆ ಬೆಟ್ಟ ಏರುತ್ತಿರುವ ವೀಡಿಯೊ ವೈರಲ್

Update: 2022-01-13 08:09 GMT

ಮಂಗಳೂರು, ಡಿ‌.13: ಸ್ವಾಮಿಯೇ ಅಯ್ಯಪ್ಪೊ, ಸ್ವಾಮಿ ಶರಣಂ ಅಯ್ಯಪ್ಪೊ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಿಯಪ್ಪೊ ಎಂದು ಹೇಳುತ್ತಾ ಮೂವರು ಶಬರಿಮಲೆ ಬೆಟ್ಟ ಏರುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 

ಈ ಯಾತ್ರಿಗಳು ಯಾರು, ಯಾವ ಜಿಲ್ಲೆಯವರು ಎಂಬುದು ಸ್ಪಷ್ಟವಾಗಿಲ್ಲ. ಶಬರಿಮಲೆ ಯಾತ್ರೆಯಲ್ಲೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಬೆಟ್ಟ  ಏರುತ್ತಿದ್ದಾರೆ.

ಈ ಮೂವರನ್ನು ವೀಡಿಯೊ ಮಾಡುತ್ತಿರುವ ವ್ಯಕ್ತಿ ಕೂಡಾ ಅವರಿಗೆ ಸಾಥ್ ನೀಡಿದ್ದಾರೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯ ಭಾರೀ ಸುದ್ದಿಯಲ್ಲಿದ್ದು ಇದೇ ಸಂದರ್ಭದಲ್ಲಿ ವೈರಲ್ ಆದ ಈ ವೀಡಿಯೊ ವಿಶೇಷ ಪಡೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News