ತಾಯಿಯ ಬುದ್ಧಿಮಾತಿಗೆ ಮನನೊಂದ ಬಾಲಕ ಆತ್ಮಹತ್ಯೆ
Update: 2022-01-16 22:16 IST
ಹೆಬ್ರಿ, ಜ.16: ಕಲಿಕೆ ವಿಚಾರದಲ್ಲಿನ ತಾಯಿಯ ಬುದ್ಧಿಮಾತಿನಿಂದ ಮನನೊಂದ ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಕೆರೆಬೆಟ್ಟು ಮಾವಿನಕಟ್ಟೆ ಎಂಬಲ್ಲಿ ಜ.16ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೆರೆಬೆಟ್ಟುವಿನ ಮಮತಾ ಹಾಗೂ ಸತೀಶ ಶೆಟ್ಟಿ ದಂಪತಿ ಪುತ್ರ ಅನ್ವಿತ್ ಶೆಟ್ಟಿ(14) ಎಂದು ಗುರುತಿಸಲಾಗಿದೆ. ಈತ ಹೆಬ್ರಿಯ ಎಸ್.ಆರ್. ಸ್ಕೂಲ್ನಲ್ಲಿ 8ನೇ ತರಗತಿಯಲ್ಲಿ ಕಲೆಯುತ್ತಿದ್ದನು. ಕಲಿಯುವ ವಿಚಾರದಲ್ಲಿ ಹಿಂದೆ ಬಿದ್ದಿದ್ದ ಅನ್ವಿತ್ಗೆ ಆತನ ತಾಯಿ ಸರಿಯಾಗಿ ಕಲಿಯುವಂತೆ ಬುದ್ಧಿ ಮಾತನ್ನು ಹೇಳುತ್ತಿದ್ದರೆನ್ನಲಾಗಿದೆ.
ಇದೇ ವಿಚಾರದಲ್ಲಿ ಮನನೊಂದ ಅನ್ವಿತ್ ಶೆಟ್ಟಿ, ಮನೆಯ ಕೋಣೆಯಲ್ಲಿರುವ ಬಾತ್ರೂಮ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.