ಕರ್ನಾಟಕ ರಾಜ್ಯ ಇರ್ಫಾನೀಸ್ ಅಧ್ಯಕ್ಷರಾಗಿ ಶೇಖ್ ಇರ್ಫಾನಿ ಪುನರಾಯ್ಕೆ
Update: 2022-01-19 05:37 GMT
ವಿಟ್ಲ, ಜ.19: ಚಪ್ಪಾರಪಡವು ಜಾಮಿಯ ಇರ್ಫಾನಿಯಾದ ಬಿರುದು ಪಡೆದಿರುವ ಕರ್ನಾಟಕದ ಇರ್ಫಾನಿಗಳ ಸಂಘಟನೆಯಾದ ಕರ್ನಾಟಕ ಜಂಇಯ್ಯತುಲ್ ಇರ್ಫಾನೀಸ್ ಇದರ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಇರ್ಫಾನಿ, ಫೈಝಿ ಅಲ್ ಅಝ್ಅರಿ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಾರಿಪಳ್ಳದ ಮೌಲಾ ಮೆಮೋರಿಯಲ್ ಅಕಾಡಮಿಯಲ್ಲಿ ಕೇಂದ್ರ ಸಮಿತಿಯ ರಿಟೈನಿಂಗ್ ಆಫೀಸರ್ ಮುಹಮ್ಮದ್ ರಫೀಕ್ ಫೈಝಿ ಇರ್ಫಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಝುಬೈರ್ ಇರ್ಫಾನಿ, ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಫೈಝಿ ಇರ್ಫಾನಿ, ಕಾರ್ಯದರ್ಶಿಯಾಗಿ ಶಾಫಿ ಫೈಝಿ ಇರ್ಫಾನಿ ಕಕ್ಕಿಂಜೆ, ಕೋಶಾಧಿಕಾರಿಯಾಗಿ ಸೈಯದ್ ಶರೀಫ್ ತಂಙಳ್ ಬುಖಾರಿ ಅಲ್ ಇರ್ಫಾನಿ ಆಯ್ಕೆಯಾದರು.
21 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು. ಝುಬೈರ್ ಇರ್ಫಾನಿ ಸ್ವಾಗತಿಸಿದರು. ಸವಾದ್ ಇರ್ಫಾನಿ ವಂದಿಸಿದರು. ಶೇಖ್ ಮುಹಮ್ಮದ್ ಇರ್ಫಾನಿ ಕಾರ್ಯಕ್ರಮ ನಿರೂಪಿಸಿದರು.