ಕೊರಗಜ್ಜನ ವೇಷ ಧರಿಸಿ ಅಪಹಾಸ್ಯ ಆರೋಪ : ಪ್ರಕರಣ ದಾಖಲು

Update: 2022-01-20 16:20 GMT

ಕಾರ್ಕಳ, ಜ.20: ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವುದಾಗಿ ಆರೋಪಿಸಿ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈದುವಿನ ರವೀಂದ್ರ ಎಂಬಾತನ ಜ.18ರಂದು ಸಂಜೆ ವೇಳೆ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವ ಸ್ಟೇಟಸ್‌ನ್ನು ತನ್ನ ಮೊಬೈಲ್‌ನಲ್ಲಿ ಹಾಕಿದ್ದ ಎನ್ನಲಾಗಿದೆ. ಈ ಮೂಲಕ ರವೀಂದ್ರ ಪೂಜ್ಯನೀಯವಾಗಿ ನಂಬಿಕೊಂಡು ಬರುತ್ತಿರುವ ಸ್ವಾಮಿ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿ ಈದು ಗ್ರಾಮದ ನಿವಾಸಿ ಚೇತನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News