ಪೇತ್ರಿ ಮದಗ ಕೆರೆಗೆ ಬಿದ್ದು ಮೃತ್ಯು
Update: 2022-01-24 16:48 GMT
ಬ್ರಹ್ಮಾವರ, ಜ.24: ಕೆರೆಗೆ ಸ್ನಾನ ಮಾಡಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕ ವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೇತ್ರಿ ಮದಗ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಪೇತ್ರಿ ಮದಗ ನಿವಾಸಿ ಪಾಂಡು ನಾಯ್ಕ್(55) ಎಂದು ಗುರು ತಿಸಲಾಗಿದೆ. ಇವರು ಮದಗ ಕೆರೆಗೆ ಸ್ನಾನ ಮಾಡಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾದರು. ಕೆರೆಯಲ್ಲಿ ಹೂಳು ತುಂಬಿ ರುವುದರಿಂದ ಸ್ಥಳೀಯರು ನೀರಿಗೆ ಇಳಿಯಲು ಹಿಂದೇಟು ಹಾಕಿದ್ದರೆನ್ನಲಾಗಿದೆ.
ಸಂಜೆ ಮುಳುಗು ತಜ್ಞ ಈಶ್ವರ ಮಲ್ಪೆಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಯ ಜತೆಗೂಡಿ ಸುಮಾರು ಸಂಜೆ 5.30ರ ಸುಮಾರಿಗೆ ಮೃತದೇಹ ಮೇಲೆಕ್ಕೆ ಎತ್ತಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.