"ನಾವು ನೋಡುವಾಗ ಆತ ನೋವಿನಲ್ಲಿ ನರಳುತ್ತಿದ್ದ": ʼಪೊಲೀಸ್ ದೌರ್ಜನ್ಯʼದಿಂದ ಸಾವನ್ನಪ್ಪಿದ ಬಾಲಕನ ಕುಟುಂಬ
ಲಖೀಂಪುರ್ ಖೇರಿ: "ತಾನು ಮೊಬೈಲ್ ಫೋನ್ ಕದ್ದಿಲ್ಲ ಎಂದು ನನ್ನ ಸಹೋದರ ಅವರ ಮುಂದೆ ಪರಿಪರಿಯಾಗಿ ರೋದಿಸಿ ಹೇಳಿಕೊಂಡರೂ ಪೊಲೀಸರು ಆತನಿಗೆ ಪ್ರಾಣಿಗೆ ಹೊಡೆದಂತೆ ಹೊಡೆದಿದ್ದರು" ಎಂದು ಇತ್ತೀಚೆಗೆ ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟ ಥಾರು ಆದಿವಾಸಿ ಜನಾಂಗದ 16 ವರ್ಷದ ಬಾಲಕನ ಸೋದರಿ ಪೂಜಾ ದುಃಖದಿಂದ ಹೇಳುತ್ತಾಳೆ ಎಂದು thewire.in ವರದಿಯಲ್ಲಿ ಉಲ್ಲೇಖಿಸಿದೆ.
ಘಟನೆ ಉತ್ತರ ಪ್ರದೇಶದ ಖೇರಿ ಜಿಲ್ಲೆಯ ಕಮಲಾಪುರಿ ಗ್ರಾಮದಲ್ಲಿ ಘಟನೆ ನಡೆದಿದ್ದು ತನ್ನದೇ ಚಿಕ್ಕಪ್ಪನ ಪುತ್ರನ ಮೊಬೈಲ್ ಫೋನ್ ಕದ್ದಿದ್ದಾನೆಂಬ ಆರೋಪ ಬಾಲಕನ ಮೇಲೆ ಹೊರಿಸಲಾಗಿತ್ತು.
"ಮನೆಗೆ ಬಂದ ನಂತರ ತನಗಾದ ಹಿಂಸೆಯನ್ನು ಸೋದರ ತಿಳಿಸಿದ್ದ, ಆತನ ಸ್ಥಿತಿ ಬಿಗಡಾಯಿಸಿದ ನಂತರವಷ್ಟೇ ಆತನನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು" ಎಂದು ಪೂಜಾ ಹೇಳಿದ್ದಾಳೆ.
ಬಾಲಕ ಜನವರಿ 23ರಂದು ಮೃತಪಟ್ಟ ನಂತರ ಆತನ ಕುಟುಂಬ ಪೊಲೀಸರ ವಿರುದ್ಧ ದೂರು ನೀಡಿದ್ದರೂ ಇಲ್ಲಿಯ ತನಕ ಎಫ್ಐಆರ್ ದಾಖಲಾಗಿಲ್ಲ. ಆದರೆ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಹೊರಠಾಣೆ ಉಸ್ತುವಾರಿ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ವಜಾಗೊಳಿಸಲಾಗಿದೆ.
ಜನವರಿ 17ರಂದು ಅಪ್ರಾಪ್ತನ ವಿರುದ್ಧ ಆರೋಪ ಹೊರಿಸಲಾಗಿದ್ದರೆ ಜನವರಿ 19ರಂದು ಪೊಲೀಸರು ಆತನನ್ನು ಠಾಣೆಗೆ ಕರೆಸಿದ್ದರು. ಆ ಸಂದರ್ಭ ಪೊಲೀಸ್ ಠಾಣೆಗೆ ಆತನ ತಾಯಿ ಮತ್ತು ಗ್ರಾಮದ ಮುಖ್ಯಸ್ಥರೂ ತೆರಳಿದ್ದರು. ನಾಲ್ಕೈದು ಗಂಟೆಗಳಲ್ಲಿ ಆತನನ್ನು ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದರು. ಆತನ ಕುಟುಂಬ ಮತ್ತೆ ವಾಪಸಾದಾಗ ಆತ ನೋವಿನಿಂದ ನರಳುತ್ತಿದ್ದ. ಆತನ ಚಿಕ್ಕಪ್ಪ ಆತನ ಪರಿಸ್ಥಿತಿ ನೋಡಿ ದೂರು ವಾಪಸ್ ಪಡೆದು ಮನೆಯಲ್ಲಿಯೇ ವಿಷಯ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದರು.
ಆದರೆ ಮನೆಗೆ ವಾಪಸಾದ ಬಾಲಕನಿಗೆ ಅಸಾಧ್ಯ ನೋವಿತ್ತು. ನೋವು ನಿವಾರಕ ಮಾತ್ರೆಗಳೂ ಆತನ ಪರಿಸ್ಥಿತಿ ಸುಧಾರಿಸಿರಲಿಲ್ಲ, ಆತನ ಪರಿಸ್ಥಿತಿ ಗಂಭೀರಗೊಂಡಾಗ ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ ಎಂದು ಆತನ ಕುಟುಂಬ ಹೇಳಿದೆ.ಆತನ ಸಾವಿನ ಸುದ್ದಿ ತಿಳಿದು ಗ್ರಾಮಸ್ಥರು ಪ್ರತಿಭಟಿಸಿದ್ದರು.
ಆದರೆ ಖೇರಿ ಎಸ್ಪಿ ಸಂಜೀವ್ ಸುಮನ್ ಈ ಕುರಿತು ವೀಡಿಯೋ ಸಂದೇಶ ಪೋಸ್ಟ್ ಮಾಡಿ, ಮೃತನನ್ನು 17 ವರ್ಷದ ಹುಡುಗ ಹಾಗೂ ಆತನನ್ನು ಎಲ್ಲರೆದುರು ವಿಚಾರಣೆ ನಡೆಸಲಾಗಿತ್ತು ಎಂದಿದ್ದಾರೆ ಹಾಗೂ ಬಾಲಕನ ತಾಯಿ ಮತ್ತಿತರರು ಆತನ ಚಿಕ್ಕಪ್ಪ ಹಾಗೂ ಇತರರು ಹಲ್ಲೆ ನಡೆಸಿದ್ದರು ಎಂದು ದೂರಿದ್ದಾರೆ ಎಂದು ಹೇಳಿದ್ದಾರೆ.
ತನ್ನ ಪುತ್ರನ ವಿರುದ್ಧ ಸುಳ್ಳು ದೂರು ನೀಡಲಾಗಿತ್ತು ಹಾಗೂ ಆತನಿಗೆ ಹಲ್ಲೆ ನಡೆಸಲು ಪೊಲೀಸರಿಗೆ ಲಂಚ ನೀಡಲಾಗಿತ್ತು ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.
ಕೃಪೆ: Thewire.in
सत्ता के संरक्षण में अंधी हो चुकी पुलिस अपनी निर्ममता के और कितने उदाहरण पेश करेगी?
— Narendra Verma (@nsvermamla) January 24, 2022
लखीमपुर में एक 16 साल के बच्चे को चोरी के जुर्म में थाने के अंदर पीट पीट कर मार दिया गया। वीभत्सता के ऐसे मामले भाजपा सरकार में आम हो चुके हैं।#नहींचाहिएभाजपा pic.twitter.com/LMimOc6r43
लखीमपुर में पुलिस ने थारू समुदाय के 17 वर्षीय युवक राहुल की हिरासत में पीटकर हत्या कर दी।
— UP Congress (@INCUttarPradesh) January 23, 2022
हिरासत में हत्याओं के लिए कुख्यात यूपी पुलिस बार-बार ऐसी क्रूरता को अंजाम देती है क्योंकि सीएम अजय सिंह बिष्ट का पुलिस पर कोई नियंत्रण नहीं है।
असली जंगलराज, जहां रक्षक ही भक्षक है। pic.twitter.com/F4JdsqUKCC
भाजपा सरकार में कस्टोडियल डेथ में नंबर वन यूपी में एक और पुलिस किलिंग!
— Samajwadi Party (@samajwadiparty) January 23, 2022
"मेरे भाई को इतना मारा की उसकी जान चली गई"
लखीमपुर खीरी में पुलिस की पिटाई से 17 वर्षीय युवक की मृत्यु अत्यंत दु:खद!
रोते बिलखते परिजनों की फरियाद सुन उन्हें न्याय दें सीएम।
जनता वोट से देगी जवाब। pic.twitter.com/F2rK3CaD7g