×
Ad

​ಉಡುಪಿ: ಏಣಿಯಿಂದ ಬಿದ್ದು ಕೃಷಿಕ ಮೃತ್ಯು

Update: 2022-01-30 20:57 IST
ಸಾಂದರ್ಭಿಕ ಚಿತ್ರ (PTI)

ಉಡುಪಿ, ಜ.30: ಏಣಿ ಮೂಲಕ ಕಾಳು ಮೆಣಸು ಕೊಯ್ಯುತ್ತಿದ್ದ ಕೃಷಿಕ ರೊಬ್ಬರು ಅಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಜ.29ರಂದು ಮಧ್ಯಾಹ್ನ ವೇಳೆ ಸಂತೆಕಟ್ಟೆಯ ಗೋಪಾಲಪುರ ಎಂಬಲ್ಲಿ ನಡೆದಿದೆ.

ಮೃತರನ್ನು ಗೋಪಾಲಪುರ ನಿವಾಸಿ ಸ್ಟಾನಿ ರೆಬೆಲ್ಲೋ(71) ಎಂದು ಗುರುತಿಸ ಲಾಗಿದೆ. ಇವರು ತೋಟದಲ್ಲಿ ಅಡಿಕೆ ಮರಕ್ಕೆ ಹಬ್ಬಿದ ಕಾಳು ಮೆಣಸನ್ನು ಏಣಿಯ ಮೂಲಕ ಕೊಯ್ಯುತ್ತಿದ್ದರು. ಆಗ ಆಕಸ್ಮಿಕವಾಗಿ ಕಾಲು ಜಾರಿ ಏಣಿ ಯಿಂದ ಕೆಳಗೆ ಬಿದ್ದ ಇವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News