ಫೆ.11: ಯುನಿವೆಫ್ ನಿಂದ 'ಸ್ನೇಹ ಸಂವಾದ' ಕಾರ್ಯಕ್ರಮ
Update: 2022-02-09 05:58 GMT
ಮಂಗಳೂರು, ಫೆ.9: ಯುನಿವೆಫ್ ಕರ್ನಾಟಕದ 'ಕುರ್ಆನ್ ಪರಿಚಯ ಅಭಿಯಾನ'ದ ಪ್ರಯುಕ್ತ ಫೆ.11ರಂದು 'ಸ್ನೇಹ ಸಂವಾದ' ಕಾರ್ಯಕ್ರಮವನ್ನು ಮಂಗಳೂರಿನ ಬಲ್ಮಠದ ಮಿಶನ್ ಕಂಪೌಂಡ್ ನಲ್ಲಿರುವ ಶಾಂತಿ ನಿಲಯದಲ್ಲಿ ಹಮ್ಮಿಕೊಂಡಿದೆ.
'ಧರ್ಮ ಮತ್ತು ಮಾನವ ಸಂಬಂಧಗಳು' ಎಂಬ ವಿಷಯದಲ್ಲಿ ಫೆ.11ರಂದು ಸಂಜೆ 6:45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಅಧ್ಯಯನ ಪೀಠದ ಅಧ್ಯಕ್ಷ ಫಾ.ಐವನ್ ಡಿ ಸೋಜ ಭಾಗವಹಿಸಲಿದ್ದಾರೆ. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.