ನಟಿಯ ಅಪಹರಣ ಮತ್ತು ಲೈಂಗಿಕ ಹಲ್ಲೆ ಪ್ರಕರಣ: ಮಲಯಾಳಂ ನಟ ದಿಲೀಪ್ ಅರ್ಜಿ ತಳ್ಳಿ ಹಾಕಿದ ಕೇರಳ ಹೈಕೋರ್ಟ್

Update: 2022-03-08 12:49 GMT

ಕೊಚ್ಚಿ: ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ಹಲ್ಲೆ ಪ್ರಕರಣದ ಎಂಟನೇ ಆರೋಪಿಯಾಗಿರುವ ನಟ ದಿಲೀಪ್ ಅವರು ಕ್ರೈಂ ಬ್ರ್ಯಾಂಚ್‍ನಿಂದ ಪ್ರಕರಣದ ಇನ್ನಷ್ಟು ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು ತಳ್ಳಿ ಹಾಕಿದೆ. ತನಿಖೆಯು ಮುಂದುವರಿಯಬಹುದು ಹಾಗೂ ಎಪ್ರಿಲ್ 15ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಪೂರ್ಣಗೊಳ್ಳಬೇಕು, ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ದಿಲೀಪ್ ವಿರುದ್ಧ ನಿರ್ದೇಶಕ ಬಾಲಚಂದ್ರಕುಮಾರ್ ಅವರು ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯ ಕುರಿತು ತಾನಿನ್ನೂ ಪರಾಮರ್ಶಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದಿಲೀಪ್ ಅವರ ವಕೀಲರು ತನಿಖೆಯನ್ನು ಪ್ರಶ್ನಿಸಿದ್ದರಲ್ಲದೆ ನಟನ ವಿರುದ್ಧ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿತ್ತು ಎಂದಿದ್ದರು.

ಈ ಪ್ರಕರಣದ ಸಂತ್ರಸ್ತೆ  ಕೂಡ ನ್ಯಾಯಾಲಯದ ಕದ ತಟ್ಟಿ ದಿಲೀಪ್ ಮನವಿಯನ್ನು ವಿರೋಧಿಸಿದ್ದರಲ್ಲದೆ ಆತ ಗಂಭೀರ ಅಪರಾಧ ಎಸಗಿದ್ದಾರೆ ಎಮದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News