×
Ad

ಉತ್ತರಪ್ರದೇಶ: ಅಖಿಲೇಶ್ ಯಾದವ್ ಅವರ ಭರವಸೆಗೆ ತಣ್ಣೀರೆರಚಿ 300ರ ಗಡಿ ದಾಟುವತ್ತ ಬಿಜೆಪಿ

Update: 2022-03-10 10:21 IST

ಲಕ್ನೋ: ಉತ್ತರಪ್ರದೇಶದಲ್ಲಿ ಗುರುವಾರ ಮತ ಎಣಿಕೆ ಆರಂಭವಾಗಿ ಎರಡು ಗಂಟೆ ಕಳೆಯುವಷ್ಟರಲ್ಲಿ  ಆಡಳಿತಾರೂಢ ಬಿಜೆಪಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ  ಬಹುಮತದ 202 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 300ರ ಗಡಿ ದಾಟುವತ್ತ ಮುನ್ನಡೆಯುತ್ತಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಭರವಸೆಗೆ ತಣ್ಣೀರೆರಚಿದೆ.

ಬೆಳಗ್ಗೆ 9:30ಕ್ಕಿಂತ  ಸ್ವಲ್ಪ ಮೊದಲು ಬಿಜೆಪಿ  250 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು,  ಅದು  300ರ ಗಡಿ ದಾಟುವ ನಿರೀಕ್ಷೆ ಮೂಡಿಸಿದೆ.

ಸಮಾಜವಾದಿ ಪಕ್ಷವು ಎರಡನೇ ಸ್ಥಾನದಲ್ಲಿದ್ದು   ಕಳೆದ ಚುನಾವಣೆಗಿಂತ ಸ್ವಲ್ಪ  ಲಾಭ ಪಡೆದಿದೆ. ಆದರೆ ಪಕ್ಷದ ನಿರೀಕ್ಷೆಗಿಂತ ಬಹಳ ಹಿಂದೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News