ಟಿವಿ ಚರ್ಚೆಗಳಲ್ಲಿ ಬಿಎಸ್‌ಪಿ ಭಾಗವಹಿಸುವುದಿಲ್ಲ ಎಂದ ಮಾಯಾವತಿ

Update: 2022-03-12 05:32 GMT

ಹೊಸದಿಲ್ಲಿ: ಮಾಧ್ಯಮಗಳ "ಜಾತಿ ಕಾರ್ಯಸೂಚಿ''ಯನ್ನು ದೂಷಿಸಿದ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ,  ಇದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅವಕಾಶಗಳನ್ನು ಘಾಸಿಗೊಳಿಸಿದೆ. ತಮ್ಮ  ಪಕ್ಷ ಟಿವಿ ಚರ್ಚೆಗಳನ್ನು ಬಹಿಷ್ಕರಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಬಿಎಸ್‌ಪಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ.

 ಬಿಎಸ್‌ಪಿಯನ್ನು "ಬಿಜೆಪಿಯ ಬಿ ತಂಡ" ಎಂದು ತೋರಿಸುವ ಮಾಧ್ಯಮಗಳ ಆಕ್ರಮಣಕಾರಿ ಪ್ರಚಾರವು ಮುಸ್ಲಿಮರು ಹಾಗೂ  ಬಿಜೆಪಿ ವಿರೋಧಿ ಮತದಾರರನ್ನು ತಮ್ಮಿಂದ ದೂರವಿಟ್ಟಿದೆ ಎಂದು ಮಾಯಾವತಿ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News