ಕೆನಡಾ: ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

Update: 2022-03-14 04:54 GMT

ಟೊರೊಂಟೊ: ಕೆನಡಾದ ಒಂಟಾರಿಯೊದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಒಂಟಾರಿಯೊದ ಕ್ವಿಂಟೆ ವೆಸ್ಟ್ ನಗರದಲ್ಲಿ ಹೆದ್ದಾರಿ 401 ರಲ್ಲಿ ಶನಿವಾರದಂದು ವ್ಯಾನ್ ಹಾಗೂ  ಟ್ರಾಕ್ಟರ್ ಟ್ರೈಲರ್ ನಡುವೆ ಈ ಘಟನೆ ನಡೆದಿದೆ ಎಂದು ಕೆನಡಿಯನ್ ಪ್ರೆಸ್ ವರದಿ ಮಾಡಿದೆ.

ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್‌ಪಾಲ್ ಸಿಂಗ್, ಮೋಹಿತ್ ಚೌಹಾಣ್ ಹಾಗೂ  ಪವನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಬಲಿಯಾದವರು 21 ರಿಂದ 24 ವರ್ಷ ವಯಸ್ಸಿನವರು. ಅವರೆಲ್ಲರೂ ಗ್ರೇಟರ್ ಟೊರೊಂಟೊ ಹಾಗೂ  ಮಾಂಟ್ರಿಯಲ್ ಪ್ರದೇಶದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಘಟನೆಯನ್ನು ಹೃದಯ ವಿದ್ರಾವಕ ದುರಂತ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News