​ಮಂಜೇಶ್ವರ : ಬೈಕ್ ಗಳ ನಡುವೆ ಅಪಘಾತ; ಗಾಯಾಳು ನಿವೃತ್ತ ಅಧ್ಯಾಪಕ ಮೃತ್ಯು

Update: 2022-03-16 08:39 GMT

ಮಂಜೇಶ್ವರ : ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ನಿವೃತ್ತ ಅಧ್ಯಾಪಕರೋರ್ವರು ಬುಧವಾರ ಮೃತ ಪಟ್ಟಿದ್ದಾರೆ.

ವರ್ಕಾಡಿ  ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟವರು.

ಅವರು ಕೊಡ್ಲ ಮೊಗರು ವಾಣಿ ವಿಜಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕರಾಗಿದ್ದರು. ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿದ್ದರು.

ಫೆ. 28ರಂದು ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಅಪಘಾತ ನಡೆದು ಗಂಭೀರ ಗಾಯಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News