ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ: ಟಿಆರ್‌ಎಸ್ ನಾಯಕನ ಪುತ್ರನ ಬಂಧನ

Update: 2022-04-19 16:01 GMT

ಸೂರ್ಯಪೇಟ್(ತೆಲಂಗಾಣ),ಎ.19: ಇಬ್ಬರು ವ್ಯಕ್ತಿಗಳು ತನಗೆ ಮತ್ತು ಬರಿಸುವ ಔಷಧಿಯನ್ನು ನೀಡಿ ಆಟೋರಿಕ್ಷಾವೊಂದರಲ್ಲಿ ಅಪಹರಿಸಿ, ಬಳಿಕ ಸೂರ್ಯಪೇಟ್‌ನ ಕೊಡದ್ ಪಟ್ಟಣದ ಮನೆಯೊಂದರಲ್ಲಿ ಎರಡು ದಿನಗಳ ಕಾಲ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು 20ರ ಹರೆಯದ ಯುವತಿಯೋರ್ವಳು ಪೊಲೀಸರಿಗೆ ದೂರು ಸಲ್ಲಿಸಿದ್ದು,ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಟಿಆರ್‌ಎಸ್‌ನ ನಗರಸಭಾ ಸದಸ್ಯ ಮುಹಮ್ಮದ್ ಖಾಜಾರ ಪುತ್ರ ಶೇಖ್ ಗೌಸ್ ಪಾಷಾ ಮತ್ತು ಆತನ ಸಹಚರ ಸಾಯಿರಾಮ ರೆಡ್ಡಿ ಎಂದು ಹೆಸರಿಸಲಾಗಿದೆ. ಶುಕ್ರವಾರ ರಾತ್ರಿ 9:30ರ ಸುಮಾರಿಗೆ ತನ್ನನ್ನು ಅಪಹರಿಸಲಾಗಿತ್ತು. ಆರೋಪಿಗಳು ತನಗೆ ಮತ್ತು ಬರಿಸುವ ಔಷಧಿಯನ್ನು ಬೆರೆಸಿದ್ದ ತಂಪು ಪಾನೀಯವನ್ನು ನೀಡಿದ್ದರು ಮತ್ತು ದಿಗ್ಬಂಧನದಲ್ಲಿಟ್ಟಿದ್ದರು. ತನ್ನನ್ನು ಥಳಿಸಿದ್ದರು ಮತ್ತು ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತ ಯುವತಿ ಮಾಧ್ಯಮಗಳಿಗೆ ತಿಳಿಸಿದಳು.

ಆರೋಪಿಗಳ ಥಳಿತದಿಂದ ತಾನು ಪ್ರಜ್ಞೆ ಕಳೆದುಕೊಂಡಿದ್ದೆ. ಪ್ರಜ್ಞೆ ಮರುಕಳಿಸಿದಾಗ ಅಲ್ಲಿಂದ ಪರಾರಿಯಾಗಿದ್ದೆ. ಮನೆಯವರಿಗೆ ತನ್ನ ಮೇಲಿನ ದೌರ್ಜನ್ಯವನ್ನು ತಿಳಿಸಿದ್ದು,ಅವರು ಪೊಲೀಸರಿಗೆ ವರದಿ ಮಾಡಿದ್ದಾರೆ ಎಂದಳು. ‘ಅವರು ಟಿಆರ್ ಎಸ್ ಅಥವಾ ಬಿಜೆಪಿ ನಾಯಕನ ಮಗನಾಗಿರಲಿ, ಖಂಡಿತವಾಗಿಯೂ ಶಿಕ್ಷೆಗೊಳಗಾಗುತ್ತಾರೆ. ಎಲ್ಲಕ್ಕೂ ಮೊದಲು ನಾವು ಮನುಷ್ಯರಾಗಿದ್ದೇವೆ’ ಎಂದು ಟಿಆರ್‌ಎಸ್ ನಾಯಕ ಬಚ್ಚು ಶ್ರೀನಿವಾಸ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News