ರಾಣಾ ದಂಪತಿ ಬಳಸಿಕೊಂಡು ಬಿಜೆಪಿ ‘ಹನುಮಾನ್ ಚಾಲೀಸಾ’ ವಿವಾದ ಹುಟ್ಟುಹಾಕಿದೆ: ಶಿವಸೇನೆ

Update: 2022-04-25 08:03 GMT

ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರವನ್ನು ಕಿತ್ತೊಗೆಯಲಾಗದೆ ಹತಾಶೆಯಲ್ಲಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ‘ಹನುಮಾನ್ ಚಾಲೀಸಾ’ ವಿವಾದವನ್ನು ಹುಟ್ಟುಹಾಕಿದೆ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಸೋಮವಾರ ಆರೋಪಿಸಿದೆ.

ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯವರು ಇತ್ತೀಚೆಗೆ ಎಬ್ಬಿಸಿರುವ ಗಲಾಟೆಯನ್ನು ಬೆಂಬಲಿಸಲಾಗದು...ಇದರ (ವಿವಾದ) ಹಿಂದೆ ಬಿಜೆಪಿಯ ಕೈವಾಡವಿದೆ.  ರಾಣಾ ದಂಪತಿಯನ್ನು(ಸಂಸದ-ಶಾಸಕ) ಬಳಸಿಕೊಂಡು ಮುಂಬೈನ ಶಾಂತಿ ಕದಡಲು ಅವರು ಯೋಜಿಸಿದ್ದರು ಹಾಗೂ  ಇವು  ಶಿವಸೇನಾ ಕಾರ್ಯಕರ್ತರನ್ನು ಕೆರಳಿಸಿದವು ಹಾಗೂ  ಅವರು ದಂಪತಿಯನ್ನು  ತಮ್ಮ ಮನೆಯಿಂದ ಹೊರಗೆ ಕಾಲಿಡಲು ಅನುಮತಿಸಲಿಲ್ಲ ಎಂದು 'ಸಾಮ್ನಾ' ಸಂಪಾದಕೀಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News