ಕಾಸರಗೋಡು : ಹೊಳೆಯಲ್ಲಿ ಮುಳುಗಿ ಬಾಲಕ ಸೇರಿ ಮೂವರು ಮೃತ್ಯು
Update: 2022-05-02 13:36 GMT
ಕಾಸರಗೋಡು : ಕುಂಡಂಗುಳಿ ಹೊಳೆಯಲ್ಲಿ ಮುಳುಗಿ ಬಾಲಕ ಸೇರಿದಂತೆ ಮೂವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕುಂಡಂಗುಳಿಯಲ್ಲಿ ನಡೆದ ದಾರುಣ ಘಟನೆಯಲ್ಲಿ ನಿತಿನ್ (38), ಅವರ ಪತ್ನಿ ದೀಕ್ಷಾ (30) ಮತ್ತು ಸಂಬಂಧಿಕ ಮನೀಷ್ (15) ಮೃತರು ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಬಳಿಕ ಕುಂಡಂಗುಳಿ ತೋನಿ ಕಡವು ಹೊಳೆಗೆ ಇಳಿದ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.