ಕಾಸರಗೋಡು : ಮರಳು ಅಕ್ರಮ ಸಾಗಾಟ ಆರೋಪ; ಮೂವರ ಬಂಧನ

Update: 2022-05-06 08:56 GMT

ಕಾಸರಗೋಡು : ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೋಡುಕಲ್ಲು ಬೊಳ್ಳಾರ್ ಎಂಬಲ್ಲಿಂದ ಮರಳು ವಶಪಡಿಸಿಕೊಂಡಿದ್ದಾರೆ.

ಮರಳು ತುಂಬಿಸಿದ್ದ ಮೂರು ಲಾರಿಗಳು ಹಾಗೂ ದಾಸ್ತಾನಿಡಲಾಗಿದ್ದ ಐದು ಲೋಡ್ ಮರಳನ್ನು ವಶಪಡಿಸಿ ಕೊಳ್ಳಲಾಗಿದೆ.

ಮರಳುಗಾರಿಕೆಯಲ್ಲಿ ತೊಡಗಿದ್ದ ಹಾಗೂ ಮರಳುಗಾರಿಕೆಗೆ ಸೌಲಭ್ಯ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾ ಗಿದೆ. ಲಾರಿ ಚಾಲಕ ಶರೀಫ್, ಮುಹಮ್ಮದ್  ರಾಫಿ ಬಾಯಿಕಟ್ಟೆ, ಅಬೂಬಕರ್  ಸಿದ್ದೀಕ್  ಎಂಬವರನ್ನು ಬಂಧಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮರಳುಗಾರಿಕೆಗೆ ಸಹಕರಿಸಿದ ಜೋಡುಕಲ್ಲು  ಪಜೀರ್ ನ ಖಾಲಿದ್, ಗುಂಡಿಬೈಲ್ ನ  ಇಬ್ರಾಹಿಂ ಮೊದಲಾದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News