ಕಾಸರಗೋಡು: ಪರವಾನಗಿ ಇಲ್ಲದ ಎರಡು ನಾಡ ಕೋವಿ ವಶಕ್ಕೆ
Update: 2022-05-11 04:42 GMT
ಕಾಸರಗೋಡು: ಮನೆಯಲ್ಲಿ ಬಚ್ಚಿಡಲಾಗಿದ್ದ ಪರವಾನಗಿ ಇಲ್ಲದ ಎರಡು ನಾಡ ಕೋವಿಗಳನ್ನು ಆದೂರು ಪೊಲೀಸರು ವಶಪಡಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಡೂರು ಚಾಮಕೊಚ್ಚಿಯ ಚಿದಾನಂದ ಯಾನೆ ಪವಿತ್ರನ್ ಎಂಬಾತನ ಮನೆಯಿಂದ ಅಕ್ರಮ ನಾಡಕೋವಿಗಳನ್ನು ವಶಪಡಿಸಲಾಗಿದ್ದು. ಚಿದಾನಂದ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದೂರು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿತ್ತು.