ಶಿಸ್ತಿನ ಕ್ರಮದ ನಂತರ ಪಕ್ಷ ತೊರೆದ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್

Update: 2022-05-14 07:38 GMT

ಚಂಡೀಗಢ: ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಟೀಕಿಸಿದ್ದಕ್ಕಾಗಿ ಶೋಕಾಸ್‌ ನೋಟಿಸ್‌ ಸ್ವೀಕರಿಸಿದ  ವಾರಗಳ ನಂತರ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ  ಪಂಜಾಬ್‌ ಘಟಕದ ಮಾಜಿ ಮುಖ್ಯಸ್ಥ ಸುನಿಲ್‌ ಜಾಖರ್‌ ಶನಿವಾರ ಪಕ್ಷ ತೊರೆದಿದ್ದಾರೆ.

"ವಿದಾಯ ಹಾಗೂ  ಶುಭವಾಗಲಿ, ಕಾಂಗ್ರೆಸ್" ಎಂದು ಜಾಖರ್ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ತಮ್ಮ ವಿರುದ್ಧ ಕ್ರಮಕ್ಕೆ ಕಾರಣರಾದ ಪಕ್ಷದ ಮಾಜಿ ಸಹೋದ್ಯೋಗಿಗಳ ವಿರುದ್ಧ ಕಟುವಾದ ಟೀಕೆಗಳ ನಂತರ ಹೇಳಿದರು.

ಬಿಜೆಪಿಯನ್ನು ಎದುರಿಸಲು ಪಕ್ಷವನ್ನು ಸರಿಪಡಿಸಿಕೊಳ್ಳುವ  ಹತಾಶ ಪ್ರಯತ್ನದಲ್ಲಿರುವ ಕಾಂಗ್ರೆಸ್  ಉದಯಪುರದಲ್ಲಿ ಸಭೆ ನಡೆಸುತ್ತಿರುವ ಸಮಯದಲ್ಲಿ ಜಾಖರ್ ಪಕ್ಷವನ್ನು ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News