ಅಸ್ಸಾಂ: ಪ್ರವಾಹ ರಕ್ಷಣಾ ಕಾರ್ಯಕರ್ತರ ಬೆನ್ನಿನ ಮೇಲೆ ಬಿಜೆಪಿ ನಾಯಕನ ಸವಾರಿಗೆ ವ್ಯಾಪಕ ಆಕ್ರೋಶ

Update: 2022-05-19 15:05 GMT
Photo: Twitter

ಅಸ್ಸಾಂ: ಪ್ರವಾಹ ಪೀಡಿತ ಪ್ರದೇಶದ ಪರಿಶೀಲನೆಗೆ ಹೊರಟ ಬಿಜೆಪಿ ಶಾಸಕರು ಪ್ರವಾಹ ರಕ್ಷಣಾ ಕಾರ್ಯಕರ್ತರ ಬೆನ್ನಿನ ಮೇಲೆ ಸವಾರಿ ಮಾಡಿರುವ ಘಟನೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ರಾಜ್ಯದಲ್ಲಿ ಈ ಘಟನೆ ನಡೆದಿದೆ. 

ಶಾಸಕನನ್ನು ಸಿಬು ಮಿಸ್ರಾ ಎಂದು ಗುರುತಿಸಲಾಗಿದ್ದು, ಇವರು ಲುಂದಿಂಗ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. 

ಅಸ್ಸಾಮ್‌ ರಾಜ್ಯದ 27 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, 6.6 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹ ಸಂತ್ರಸ್ತರಾಗಿದ್ದಾರೆ. ಈ ನಡುವೆ, ಪರಿಶೀಲನೆಗೆಂದು ಬಂದ ಶಾಸಕ ರಕ್ಷಣಾ ತಂಡದ ಸಿಬ್ಬಂದಿಯೋರ್ವರ ಬೆನ್ನೇರಿ ದೋಣಿಗೆ ಹೋಗಿರುವುದು ಕಂಡು ಬಂದಿದೆ, ಅಲ್ಲಿ ಕೇವಲ ಮೊಣಕಾಲು ಮುಳುಗುವಷ್ಟೇ ನೀರಿದ್ದರೂ, ರಕ್ಷಣಾ ಸಿಬ್ಬಂದಿಯಲ್ಲಿ ತನ್ನನ್ನು ಹೊರಿಸಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ʼಸಂವೇದನಾರಹಿತ ಶಾಸಕʼ ಎಂದು ಹಲವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News