ಹೊಳೆಗೆ ಬಿದ್ದು ಮೀನುಗಾರ ಮೃತ್ಯು
Update: 2022-05-21 16:42 GMT
ಬೈಂದೂರು : ಪಡುವರಿ ಗ್ರಾಮದ ಸುಮನಾವತಿ ಹೊಳೆಯಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ಮಾಡುತಿದ್ದಾಗ ಅಕಸ್ಮಿಕವಾಗಿ ಆಯತಪ್ಪಿ ಹೊಳೆಯ ನೀರಿಗೆ ಬಿದ್ದ ಸುಂದರ ಖಾರ್ವಿ (42) ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 20ರ ಸಂಜೆ ನಡೆದಿದೆ.
ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಮೃತಶರೀರ ಇಂದು ಬೆಳಗ್ಗೆ ೬:೩೦ರ ಸುಮಾರಿಗೆ ಪಡುವರಿ ಗ್ರಾಮದ ಸೇನೇಶ್ವರ ದೇವಸ್ಥಾನದ ಬಳಿ ಅರಬ್ಬಿ ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.