ಅರೆ ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

Update: 2022-05-24 15:02 GMT

ಮಂಗಳೂರು, ಮೇ ೨೪: ಬೆಂಗಳೂರಿನ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ ಶಿವಮೊಗ್ಗ,  ಹಾಸನ,  ವಿಜಯನಗರ,  ದ.ಕ.,  ಮೈಸೂರು ಜಿಲ್ಲೆಗಳ ಅರೆಕಾಲಿಕ ವರದಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ, ಪುರಸಭೆ ವ್ಯಾಪ್ತಿಯ 10 ಕಿ.ಮೀ ಆಸುಪಾಸಿನಲ್ಲಿ ವಾಸಿಸುತ್ತಿರುವ 24 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು, ಪಿ.ಜಿ ಡಿಪ್ಲೊಮಾ, ಪತ್ರಿಕೋದ್ಯಮ ಅಥವಾ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದು ಕನಿಷ್ಟ ೨ ವರ್ಷಗಳ ಮಾಧ್ಯಮ ಅನುಭವ ಮತ್ತು ಕಂಪ್ಯೂಟರ್, ವರ್ಡ್ ಪ್ರೊಸೆಸಿಂಗ್, ಸುದ್ದಿ ಸಂಗ್ರಹ ಉಪಕರಣ ಹಾಗೂ ವಿದ್ಯುನ್ಮಾನ ಮಾಧ್ಯಮಕ್ಕೆ ವರದಿಗಾರಿಕೆಯಲ್ಲಿ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಪೂರ್ಣ ವಿವರಗಳು ಮತ್ತು ಅಗತ್ಯ ದಾಖಲೆಗಳ ಪ್ರತಿ ಹಾಗೂ ಅರ್ಜಿ ಶುಲ್ಕದ ಬ್ಯಾಂಕ್  ಡ್ರಾಫ್ಟ್ ರಸೀದಿಯ ಪ್ರತಿಯೊಂದಿಗೆ ಜೂ.೧೦ರೊಳಗೆ ನೋಂದಾಯಿತ ಅಂಚೆ ಮೂಲಕ ಡೆಪ್ಯೂಟಿ ಡೈರೆಕ್ಟರ್ ಜನರಲ್, ಪ್ರಾದೇಶಿಕ ಸುದ್ದಿ ಘಟಕ, ಆಲ್ ಇಂಡಿಯಾ ರೇಡಿಯೋ, ರಾಜ ಭವನ ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ಕಳುಹಿಸುವಂತೆ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News