ಸ್ವಗ್ರಾಮದಲ್ಲಿ ಗಾಯಕ ಸಿಧು ಮೂಸೇವಾಲ ಅಂತ್ಯಕ್ರಿಯೆ, ಸಾವಿರಾರು ಜನರಿಂದ ಅಂತಿಮ ನಮನ

Update: 2022-05-31 10:43 GMT
SIDHU MOOSEWALA VIA INSTAGRAM

ಚಂಡೀಗಢ:  ಪಂಜಾಬ್‌ನ ಸ್ವಗ್ರಾಮ ಜವಾಹರ್ಕೆಯಲ್ಲಿ ಮಂಗಳವಾರ ಖ್ಯಾತ ಗಾಯಕ ಸಿಧು ಮೂಸೇವಾಲ ಅವರ ಅಂತ್ಯ ಕ್ರಿಯೆ ನೆರವೇರಿದ್ದು, ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು  ಎಂದು NDTV ವರದಿ ಮಾಡಿದೆ.

ಜನಪ್ರಿಯ ಗಾಯಕನಿಗೆ ಅಂತಿಮ ನಮನ ಸಲ್ಲಿಸಲು ದೂರದ ಸ್ಥಳಗಳಿಂದ ಸಾವಿರಾರು ಜನರು ಪಂಜಾಬ್‌ನ ಜವಾಹರ್ಕೆಯಲ್ಲಿ ಜಮಾಯಿಸಿದರು.  ಇಂದು ಮುಂಜಾನೆ ಭಾರೀ ಭದ್ರತಾ ನಿಯೋಜನೆಯ ನಡುವೆ ಅವರ ಕುಟುಂಬವು ಮಾನ್ಸಾ ಸಿವಿಲ್ ಆಸ್ಪತ್ರೆಯಿಂದ ಸಿಧು  ಅವರ ಮೃತದೇಹವನ್ನು ಮನೆಗೆ ಕೊಂಡೊಯ್ಯಿತು.

ಈ ವರ್ಷದ ಪಂಜಾಬ್ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಮೂಸವಾಲಾ  ಅವರಿಗೆ ನೀಡಲಾಗಿದ್ದ  ಭದ್ರತೆಯನ್ನು ರಾಜ್ಯ ಸರಕಾರ ಕಡಿತಗೊಳಿಸಿದ ಒಂದು ದಿನದ ನಂತರ ರವಿವಾರ ಸಂಜೆ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ಸಿವಿಲ್ ಆಸ್ಪತ್ರೆಯಲ್ಲಿ ಐದು ವೈದ್ಯರ ತಂಡವು ನಡೆಸಿದ ಮರಣೋತ್ತರ ಪರೀಕ್ಷೆಯ ಪ್ರಕಾರ, ಗಾಯಕನ ದೇಹಕ್ಕೆ ಎರಡು ಡಜನ್‌ಗೂ ಹೆಚ್ಚು ಬುಲೆಟ್‌ಗಳನ್ನು ಹೊಕ್ಕಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News