ಒಡಿಶಾ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂಪುಟದ ಎಲ್ಲಾ ಸಚಿವರಿಂದ ರಾಜೀನಾಮೆ

Update: 2022-06-04 14:46 GMT

ಬುಬನೇಶ್ವರ್: ಜೂನ್ 5 ರಂದು ನಡೆಯಲಿರುವ ಪ್ರಮುಖ ಕ್ಯಾಬಿನೆಟ್ ಪುನರ್ರಚನೆಗೆ ಒಂದು ದಿನ ಮೊದಲು, ಎಲ್ಲಾ ಒಡಿಶಾ ಸಚಿವರು ಶನಿವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಒಡಿಶಾ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಸೂರ್ಯ ನಾರಾಯಣ ಪಾತ್ರೋ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಚಿವರು ರಾಜೀನಾಮೆ ಸಲ್ಲಿಸಿದರು. ಉಪಸಭಾಪತಿಗೆ ರಾಜೀನಾಮೆ ಸಲ್ಲಿಸಿದರು.ರವಿವಾರ ಬೆಳಗ್ಗೆ 11.45ರ ಸುಮಾರಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಜೂನ್ 5 ರ ಪುನರ್ರಚನೆಗೆ ಮುಂಚಿತವಾಗಿ ಎಲ್ಲಾ ಸಚಿವರಿಗೆ ರಾಜೀನಾಮೆ ನೀಡುವಂತೆ ಶನಿವಾರ ಹೇಳಿದ್ದರು. ಮೂರು ವರ್ಷದ ಸಚಿವ ಸಂಪುಟದಲ್ಲಿ ಇದು ಮೊದಲ ಪುನಾರಚನೆಯಾಗಲಿದೆ. ಎರಡು ದಿನಗಳ ನಂತರ ಒಡಿಶಾದಿಂದ ರಾಜ್ಯಪಾಲರು ಹೊರಡಲಿರುವ ಕಾರಣ ಸೋಮವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಪಟ್ನಾಯಕ್ ಅವರು ಜೂನ್ 20 ರಿಂದ ರೋಮ್ ಮತ್ತು ದುಬೈಗೆ ಭೇಟಿ ನೀಡಲಿದ್ದಾರೆ ಮತ್ತು ಅವರು ನಿರ್ಗಮಿಸುವ ಮೊದಲು ಕ್ಯಾಬಿನೆಟ್ ಅನ್ನು ಪುನರ್ರಚಿಸಲು ಬಯಸಿದ್ದಾರೆ ಎಂದು ಸಿಎಂ ಕಛೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News