ಮೂಳೂರು ಸುನ್ನಿ ಸೆಂಟರ್‌ ನಲ್ಲಿ ಪರಿಸರ ದಿನಾಚರಣೆ

Update: 2022-06-05 17:17 GMT

ಕಾಪು: ರಿಕಾಝುಲ್ ಇಹ್ಸಾನ್ ಸ್ಟೂಡೆಂಟ್  ಅಸೋಸಿಯೇಶನ್ ಇದರ ವತಿಯಿಂದ ಪರಿಸರ ದಿನಾಚರಣೆಯು ರವಿವಾರ ಅಲ್-ಇಹ್ಸಾನ್ ಕ್ಯಾಂಪಸ್‍ನಲ್ಲಿ ನಡೆಯಿತು.

ಮರ್ಕಝ್ ತಅಲೀಮುಲ್ ಇಹ್ಸಾನ್ ಇದರ ಸಹ ವ್ಯವಸ್ಥಾಪಕರಾಗಿರುವ ಸಿದ್ದೀಖ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್-ಇಹ್ಸಾನ್ ದಅವಾ ಕಾಲೇಜು ಇದರ ಪ್ರಾಂಶುಪಾಲರಾದ  ಸ್ವಾಬಿರ್ ಸಅದಿ ಅಧ್ಯಕ್ಷತೆ ವಹಿಸಿದರು. ಅಲ್-ಇಹ್ಸಾನ್ ಎಜುಕೇಶನಲ್ ಸೆಂಟರ್ ಇದರ ಸಿಬ್ಬಂದಿ ಬಾತೀಷ್ ಹಿಮಮಿ ಸ್ಸಖಾಫಿ, ಹಾಫಿಳ್ ಮಸ್‍ರೂರ್ ಸುರೈಜಿ ಸಖಾಫಿ, ಸಲಾಂ ಸಅದಿ ಹಾಗೂ ಹಾಫಿಳ್ ಹಾರಿಸ್ ಸಅದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಸ್ತಫಾ ಮದ್ದಡ್ಕ ಪರಿಸರದ ಕುರಿತಾಗಿ ವಿಷಯ ಮಂಡನೆಯನ್ನು ಮಂಡಿಸಿದರು. ಅಲ್-ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲರಾದ  ಸ್ವಾಬಿರ್ ಸಅದಿ ಪ್ರಕೃತಿಯ ಉಳಿವಿಗಾಗಿ ಗಿಡ ನೆಡುವ ಮೂಲಕ ಮಹತ್ವದ ಪಾತ್ರವನ್ನು ವಹಿಸಿದರು.

ರಿಸಾ ಇದರ ಪ್ರಧಾನ ಕಾರ್ಯದರ್ಶಿ ಅದ್ನಾನ್ ಮುಡಿಪು ಸ್ವಾಗತಿಸಿದರು ಹಾಗೂ ಕೋಶಾಧಿಕಾರಿ ಹಫೀಳ್ ಕೈಕಂಬ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News