ಲಡಾಖ್ ನಲ್ಲಿ ಚೀನಾದ ಮೂಲಸೌಕರ್ಯ ನಿರ್ಲಕ್ಷಿಸಿ ಕೇಂದ್ರ ಸರಕಾರದಿಂದ ಭಾರತಕ್ಕೆ ದ್ರೋಹ: ರಾಹುಲ್
Update: 2022-06-10 18:33 GMT
ಹೊಸದಿಲ್ಲಿ, ಜೂ. 10: ಲಡಾಕ್ ಸಮೀಪ ಚೀನ ನಿರ್ಮಿಸುತ್ತಿರುವ ರಕ್ಷಣಾ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರ ಸರಕಾರ ‘ಭಾರತಕ್ಕೆ ದ್ರೋಹ’ ಎಸಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
‘‘ಭವಿಷ್ಯದಲ್ಲಿ ಪ್ರತಿಕೂಲ ಕ್ರಮ ಕೈಗೊಳ್ಳಲು ಚೀನಾ ಅಡಿಪಾಯ ನಿರ್ಮಾಣ ಮಾಡುತ್ತಿದೆ’’ ಎಂದು ಅವರು ಹೇಳಿದ್ದಾರೆ. ಲಡಾಖ್ನಲ್ಲಿ ಚೀನಾ ಮೂಲ ಸೌಕರ್ಯ ನಿರ್ಮಾಣ ಮಾಡುತ್ತಿರುವ ಬಗ್ಗೆ ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿರುವ ಬಗೆಗಿನ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.
2020 ಜೂನ್ನಲ್ಲಿ ಪೂರ್ವ ಲಡಾಖ್ನ ಗಲ್ವಾನ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಉಭಯ ರಾಷ್ಟ್ರಗಳು ಗಡಿ ಬಿಕ್ಕಟ್ಟು ಮುಂದುವರಿದಿದೆ.