ಅಂದರ್ ಬಾಹರ್: ನಾಲ್ವರ ಬಂಧನ
Update: 2022-06-12 15:36 GMT
ಗಂಗೊಳ್ಳಿ, ಜೂ.೧೨: ನೂಜಾಡಿ ಜಂಕ್ಷನ್ ಬಳಿ ಜೂ.೧೧ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರಾದ ಶ್ರೀನಿವಾಸ ದೇವಾಡಿಗ (೫೬), ಅಶ್ವತ್ (೩೫), ಶ್ರೀಕಾಂತ್ (೩೨), ಕರ್ಕುಂಜೆಯ ದಿನಕರ(೫೪) ಬಂಧಿತ ಆರೋಪಿಗಳು. ಇವರಿಂದ ೩,೯೯೦ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.