ಸಿದ್ದಾಪುರ: ಉಚಿತ ಕರಿಯರ್ ಗೈಡೆನ್ಸ್, ಪುಸ್ತಕ ವಿತರಣಾ ಕಾರ್ಯಕ್ರಮ

Update: 2022-06-23 14:07 GMT

ಸಿದ್ದಾಪುರ : ನಮ್ಮ ನಾಡ ಒಕ್ಕೂಟ (ರಿ) ಸಿದ್ದಾಪುರ ಘಟಕದ ವತಿಯಿಂದ ಉಚಿತ ಕರಿಯರ್ ಗೈಡೆನ್ಸ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆಯಿತು.

ನಮ್ಮ ನಾಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನಾಫ್ ಮೀರ್ಜಾನ್ಕರ್ ರವರ ಮಾರ್ಗದರ್ಶನದೊಂದಿಗೆ ನಮ್ಮ ನಾಡ ಒಕ್ಕೂಟದ ತಾಲೂಕು ಅಧ್ಯಕ್ಷ ನೂರುಲ್ ಅಮೀನ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ವಿ.ಆರ್ ನಾಯಕ್ ಮತ್ತು ಮುಖ್ಯ ಅತಿಥಿಗಳಾಗಿ ಕೌನ್ಸಿಲರ್ ಮುನವ್ವರ್ ಗುರ್ಕರ್, ತಾಲೂಕು ಪಂಚಾಯತ್ ಸದಸ್ಯ ನಾಸಿರ್ ಖಾನ್ ಹಾಗೂ ಅಲ್ಪಸಂಖ್ಯಾತ ಅಧ್ಯಕ್ಷ ಅಬ್ದುಲ್ಲಾ ಹೆರೂರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮುನೀರ್, ಮುನ್ನಾ, ಅಫನ್, ಇಲ್ಯಾಸ್, ಇರ್ಫಾನ್ ರಝ್ವಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 125 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು ಮತ್ತು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  99.36% ಅಂಕ ಗಳಿಸಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಸಿದ್ದಾಪುರ ತಾಲೂಕಿನ ತಸ್ಮಿಯಾ, 96% ಗಳಿಸಿದ ಫರ್ಹೀನ್ ಬಾನು ಮತ್ತು 90% ಪಡೆದ ನುತ್ಫಾ ಇವರನ್ನು ಸನ್ಮಾನಿಸಲಾಯಿತು.

ಖಾದರ್ ಸ್ವಾಗತಿಸಿದರು. ಅಬ್ದುಲ್ ಖದೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News