ಎಸ್ಡಿಪಿಐ ತಲಪಾಡಿ ವತಿಯಿಂದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Update: 2022-06-24 14:50 GMT

ಬಂಟ್ವಾಳ, ಜೂ.24: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಬೂತ್  ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ 2021-22 ನೇ ಸಾಲಿನ ಎಸೆಸೆಲ್ಸಿ, ಪಿಯುಸಿ ಹಾಗೂ ಮದರಸದ ಪಬ್ಲಿಕ್ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆಗೈದ ತಲಪಾಡಿಯ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 

ವಿದ್ಯಾರ್ಥಿಗಳಿಗೆ ಮತ್ತು  ಪೋಷಕರಿಗೆ ಮಾಹಿತಿ ಕಾರ್ಯಾಗಾರವು  ಅಲ್ ಖಝನ  ಸಮುದಾಯ ಭವನ ತಲಪಾಡಿಯಲ್ಲಿ  ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ತಲಪಾಡಿ ಬೂತ್ ಸಮಿತಿ  ಅಧ್ಯಕ್ಷ ಲತೀಫ್ ಬಿ ಸಿ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ತಲಪಾಡಿ ಇದರ ಖತೀಬರಾದ ಝುಬೈರ್ ಫೈಝಿ, ಎಸ್ ಡಿ ಪಿ ಐ  ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್ ಎಚ್, ಎಸ್ ಡಿ ಪಿ ಐ  ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ ಸಿ ರೋಡ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುನೀಷ್ ಅಲಿ, ತರಬೇತುದಾರರಾದ ಅಬ್ದುಲ್ ಖಾದರ್, ಎಸ್ ಡಿ ಪಿ ಐ  ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು, ಬದ್ರಿಯಾ ಜುಮಾ ಮಸೀದಿ ತಲಪಾಡಿ  ಅಧ್ಯಕ್ಷ ಇದ್ದಿನಬ್ಬ ಕರ್ನಾಟಕ, ಹಿರಿಯ ಸಮಾಜ ಸೇವಕ ರಾಮಣ್ಣ ಶೆಟ್ಟಿ, ಎಸ್ ಡಿ ಟಿ ಯು ಬಂಟ್ವಾಳ ಅಧ್ಯಕ್ಷ ಮುಸ್ತಾಕ್ ಬಿಎಂ, ಬದ್ರಿಯಾ ಜುಮಾ ಮಸೀದಿ ತಲಪಾಡಿ ಉಪಾಧ್ಯಕ್ಷ ನಾಸಿರ್ ಟಿ ಎಚ್, ಬೈಕಂಡಿ  ಚಿಕನ್ ಸ್ಟಾಲ್ ಮಾಲಕ ಅಮೀರ್ ಹಂಝ ಯುವ ಉದ್ಯಮಿ ಸವಾಜ್ ತಲಪಾಡಿ, ಎಸ್ ಡಿ ಪಿ ಐ ಕುಮೇರು ಅಧ್ಯಕ್ಷ ಆಸಿಫ್ ಆರ್ ಕೆ  ಮತ್ತಿತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರ್ದೇಶಕರಾಗಿ ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಸದಸ್ಯ ಶಾವುಲ್ ತಲಪಾಡಿ  ಕಾರ್ಯಕ್ರಮ ನಿರ್ವಹಿಸಿದರು. ಅನ್ವರ್ ಕೆಎಚ್ ಸ್ವಾಗತಿಸಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News