ಇಸ್ರೋದ ಮಂಗಳಯಾನಕ್ಕೆ 'ಪಂಚಾಂಗ' ಸಹಾಯ ಮಾಡಿತು ಎಂದು ಹೇಳಿ ಟ್ರೋಲ್‍ಗೀಡಾದ ನಟ ಆರ್. ಮಾಧವನ್

Update: 2022-06-25 13:22 GMT

 ಚೆನ್ನೈ: ಖ್ಯಾತ ತಮಿಳು ನಟ ಆರ್ ಮಾಧವನ್ ಅವರ ನಿರ್ದೇಶನದ ಮೊದಲ ಚಿತ್ರ `ರಾಕೆಟ್ರಿ: ದಿ ನಂಬಿ ಎಫೆಕ್ಟ್' ಬಿಡುಗಡೆಗೊಳ್ಳಲು ಇನ್ನೇನು ಕೆಲವೇ ದಿನಗಳಿವೆಯೆನ್ನುವಾಗ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ವ್ಯಸ್ತರಾಗಿರುವ ಮಾಧವನ್ ತಾವು ಆಡಿದ ಮಾತೊಂದರ ಕಾರಣ ಸಾಮಾಜಿಕ ಜಾಲತಾಣಿಗರಿಂದ ಟ್ರೋಲ್ ಆಗುತ್ತಿದ್ದಾರೆ.

ಹಿಂದು ಧರ್ಮದ ಪಂಚಾಂಗವು ಇಸ್ರೋಗೆ ತನ್ನ ಮಂಗಳಯಾನದ ಭಾಗವಾಗಿ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿ ಮಂಗಳದ ಅಂಗಳಕ್ಕೆ ತಲುಪಲು ಸಹಾಯ ಮಾಡಿತು ಎಂದು ಮಾಧವನ್ ಹೇಳಿರುವುದೇ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಧವನ್ ಆವರು ತಮ್ಮ ನಿರ್ದೇಶನದ ಹೊಸ ಚಿತ್ರದ ಪ್ರಮೋಷನ್ ವೇಳೆ ಆಡಿದ ಮಾತುಗಳ ವೀಡಿಯೋ ವೈರಲ್ ಆಗಿದೆ. "ವಿಜ್ಞಾನ ಎಲ್ಲರಿಗೂ ಅರ್ಥವಾಗದು, ವಿಜ್ಞಾನ ಗೊತ್ತಿಲ್ಲದೇ ಇದ್ದರೂ ಚಿಂತೆಯಿಲ್ಲ ಆದರೆ ಕೆಲವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕುರಿತು  ನಿಮಗೆ ತಿಳಿದಿಲ್ಲದೇ ಇದ್ದರೆ ನಿಮ್ಮ ಬಾಯಿ ಮುಚ್ಚಿ ಇರುವುದು ಒಳ್ಳೆಯದು" ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಆರ್ ಮಾಧವನ್ ಅವರು ಅಧಿಕೃತವಾಗಿ ಚಾಕಲೇಟ್ ಬಾಯ್ ಇಂದ ವಾಟ್ಸ್ಯಾಪ್ ಅಂಕಲ್ ಆಗಿ ಬಿಟ್ಟಿದ್ದಾರೆ" ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News