ಐಎಸ್‌ಎಫ್‌ ಅಸೀರ್ ಪ್ರಾಂತ್ಯ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2022-06-27 17:37 GMT

ಖಮೀಶ್ ಮುಷಾಯತ್: ಇಂಡಿಯನ್ ಸೋಶಿಯಲ್ ಫೋರಮ್ ಐಎಸ್‌ಎಫ್‌ ಸೌದಿ ಅರೇಬಿಯಾದ್ಯಂತ ನಡೆಸುತ್ತಿರುವ ಸದಸ್ಯತ್ವ ಅಭಿಯಾನದ ಪ್ರಯುಕ್ತ ಐಎಸ್‌ಎಫ್‌ ಅಸೀರ್ ಪ್ರಾಂತ್ಯದ ಉದ್ಘಾಟನಾ ಕಾರ್ಯಕ್ರಮವು ಕಮೀಶ್ ಮುಶಾಯತ್‌ನಲ್ಲಿರುವ ಮುನೀರಾ ಆಡಿಟೋರಿಯಂನಲ್ಲಿ ನಡೆಯಿತು.

ಇಕ್ಬಾಲ್ ಕೂಳೂರು (ಅಧ್ಯಕ್ಷರು, ಜಿಝಾನ್ ಕರ್ನಾಟಕ ಚಾಪ್ಟರ್) ರವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳಿಂದ ಐಎಸ್‌ಎಫ್‌ ಗೆ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ರಾಜ್ಯ ಸಮಿತಿಯ ವೆಲ್ಫೇರ್ ಸಂಚಾಲಕರಾದ ಹನೀಫಾ ಮಂಜೇಶ್ವರ ಶಾಲು ಹೊದಿಸಿ ಸ್ವಾಗತಿಸಿದರು. 

ಕಾರ್ಯಕ್ರಮವನ್ನು ಹನೀಫಾ ಚಾಳಿಪ್ಪುರಂ,(ಅಧ್ಯಕ್ಷರು, ಐಎಸ್‌ಎಫ್‌ ಅಸೀರ್ ರಾಜ್ಯ ಸಮಿತಿ) ಯವರು ಉದ್ಘಾಟಿಸಿದರು. ಮುಖ್ಯ ಪ್ರಭಾಷಣ ಮಾಡಿದ ಅನಸ್ ತಿರುನ್ನಾವಾಯ ರವರು ದೇಶದ ಸಂವಿಧಾನ ಉಳಿಯಬೇಕಾದರೆ ಸ್ವಾತಂತ್ಯ ಹೋರಾಟಗಾರರ ಜೈಲುವಾಸ, ಸರ್ವಾಧಿಕಾರಿಗಳ ಗುಂಡುಗಳಿಗೆ ದೇಶದ ಎಲ್ಲಾ ಪ್ರಜೆಗಳು ಎದೆಯೊಡ್ಡುವ ಕಾಲ ಮತ್ತೊಮ್ಮೆ ಮರುಕಳಿಸಲಿದೆ ಎಂದರು. ಐಎಸ್‌ಎಫ್‌ ಖಮೀಷ್ ಬ್ಲಾಕ್ ಅಧ್ಯಕ್ಷರಾದ ಇಲ್ಯಾಸ್ ಇಡಕ್ಕುನ್ನಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಭಾ ಬ್ಲಾಕ್ ಅಧ್ಯಕ್ಷರಾದ ಅಬೂಬಕ್ಕರ್ ಸಅದಿಯವರು ಸ್ವಾಗತಿದರು.

ಮುನೀರ್ ಚಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿ, ಯೂಸುಫ್ ಚೇಳಾಂಬ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News